ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಭಾನುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.
ಚೀನಾದಿಂದ ಬೆದರಿಸುವಿಕೆ ಹೊಸದೇನಲ್ಲಾ. ಬೆನ್ನು ಮೂಳೆ ಇಲ್ಲದ ಸರ್ಕಾರ ಎಂದು ವ್ಯಾಖ್ಯಾನಿಸಬಹುದೇ ಎಂದು ಕೇಳಿದೆ. ಚೀನಾದೊಂದಿಗಿನ ಸಮನ್ವಯಕ್ಕೆ ಮೋದಿ ಸರ್ಕಾರ ತಳ್ಳುವಿಕೆಯು ವಾಸ್ತವಿಕವಾಗಿ ಅದರ ಪ್ರಾದೇಶಿಕ ಆಕ್ರಮಣವನ್ನು ಕಾನೂನುಬದ್ಧಗೊಳಿಸುತ್ತಿದೆಯೇ ಎಂದು ಕಾಂಗ್ರೆಸ್ ಕೇಳಿದೆ.
ಟಿಯಾಂಜಿನ್ನಲ್ಲಿ ಅಧ್ಯಕ್ಷ ಕ್ಸಿ ಅವರನ್ನು ಭೇಟಿಯಾದ ಮೋದಿ, ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಚೀನಾದೊಂದಿಗಿನ ಬಾಂಧವ್ಯವನ್ನು ಮುಂದುವರಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದರು.
ಕ್ಸಿ ಜಿನ್ ಪಿಂಗ್ ಜೊತೆಗಿನ ಪ್ರಧಾನಿ ಮೋದಿ ಅವರ ಸಭೆಯಲ್ಲಿ ಜೂನ್ 2020ರಲ್ಲಿ ನಡೆದ ಗಾಲ್ವಾನಾ ಕಣಿವೆ ಸಂಘರ್ಷದಲ್ಲಿ ಪ್ರಾಣತೆತ್ತ 20 ವೀರ ಯೋಧರ ತ್ಯಾಗದ ಬೆಲೆಯನ್ನು ಮೌಲ್ಯಮಾಪನ ಮಾಡಬೇಕು ಎಂದಿದ್ದಾರೆ. ಆದರೂ, ಚೀನಾದ ಆಕ್ರಮಣವನ್ನು ಗುರುತಿಸುವ ಬದಲು, ಜೂನ್ 19, 2020 ರಂದು ಪ್ರಧಾನಿ ಮೋದಿ ಚೀನಾಕ್ಕೆ (ಕುಖ್ಯಾತ) ಕ್ಲೀನ್ ಚಿಟ್ ನೀಡಿದರು ಎಂದಿದ್ದಾರೆ.
ಲಡಾಖ್ನಲ್ಲಿ ಚೀನಾ ಗಡಿಯಲ್ಲಿ ಯಥಾಸ್ಥಿತಿಯನ್ನು ಸಂಪೂರ್ಣವಾಗಿ ಮರುಸ್ಥಾಪಿಸಲು ಸೇನಾ ಮುಖ್ಯಸ್ಥರು ಒತ್ತಾಯಿಸಿದ್ದಾರೆ. ಅದನ್ನು ಸಾಧಿಸಲು ವಿಫಲವಾಗಿದ್ದರೂ ಮೋದಿ ಸರ್ಕಾರವು ಚೀನಾದೊಂದಿಗೆ ಸಮನ್ವಯಕ್ಕೆ ಮುಂದಾಗಿದೆ. ವಾಸ್ತವಿಕವಾಗಿ ಅವರ ಪ್ರಾದೇಶಿಕ ಆಕ್ರಮಣವನ್ನು ಕಾನೂನುಬದ್ಧಗೊಳಿಸಿದೆ" ಎಂದು ಅವರು ಟೀಕಿಸಿದ್ದಾರೆ.
ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದೊಂದಿಗೆ ಚೀನಾದ ಪಾಲುದಾರಿಕೆ ಕುರಿತು ಜುಲೈ 4, 2025 ರಂದು ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಸಿಂಗ್ ಪ್ರಾಮಾಣಿಕವಾಗಿ ಹೇಳಿದ್ದಾರೆ "ಈ ಅಪವಿತ್ರ ಮೈತ್ರಿಗೆ ಪ್ರತಿಕ್ರಿಯಿಸುವ ಬದಲು, ಮೋದಿ ಸರ್ಕಾರವು ಅದನ್ನು ಸದ್ದಿಲ್ಲದೆ ಒಪ್ಪಿಕೊಂಡಿದೆ.ಈಗ ಚೀನಾಕ್ಕೆ ಭೇಟಿ ನೀಡುವ ಮೂಲಕ ಅದಕ್ಕೆ ಬಹುಮಾನ ನೀಡುತ್ತಿದೆ ಎಂದು ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.




