HEALTH TIPS

ಲಕ್ಷದ್ವೀಪ ಟೂನ ಮೀನುಗಳಿಗೆ ಜಾಗತಿಕ ಪರಿಸರ-ಲೇಬಲಿಂಗ್ ಪಡೆಯಲು ಕೇಂದ್ರ ಸರ್ಕಾರದಿಂದ ಕ್ರಮ: ಸಮುದ್ರಾಹಾರ ರಫ್ತು ವಲಯಕ್ಕೆ ದೊಡ್ಡ ಆಸ್ತಿಯಾಗಲಿದೆ ಎಂದು ಕೇಂದ್ರ ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್

ಕೊಚ್ಚಿ: ಸಾಂಪ್ರದಾಯಿಕ ಮೀನುಗಾರಿಕೆ ವಿಧಾನಗಳನ್ನು ಬಳಸಿಕೊಂಡು ಹಿಡಿಯುವ ಲಕ್ಷದ್ವೀಪ ಟೂನ (ಟ್ಯೂನ) ಗಾಗಿ ಜಾಗತಿಕ ಪರಿಸರ-ಲೇಬಲಿಂಗ್ ಟ್ಯಾಗ್ ಪಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

ಕಡಿಮೆ ಪರಿಸರ ಪರಿಣಾಮವನ್ನು ಹೊಂದಿರುವ ಮತ್ತು ಸುಸ್ಥಿರವಾಗಿರುವ ಲಕ್ಷದ್ವೀಪದಲ್ಲಿ ಪೆÇೀಲ್-ಅಂಡ್-ಲೈನ್ ಮೀನುಗಾರಿಕೆಯನ್ನು ಬಳಸಿಕೊಂಡು ಹಿಡಿಯುವ ಟೂನ ಮೀನುಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಪ್ರಮಾಣೀಕರಣವನ್ನು ಪಡೆಯಲು ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಹೇಳಿದರು. 


ಲಕ್ಷದ್ವೀಪ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಯ ಕುರಿತು ಚರ್ಚಿಸಲು ಕೊಚ್ಚಿಯಲ್ಲಿ ನಡೆದ ಉನ್ನತ ಮಟ್ಟದ ಸಮಾಲೋಚನಾ ಸಭೆಯಲ್ಲಿ ಸಚಿವರು ಮಾತನಾಡುತ್ತಿದ್ದರು.

ಈ ಕ್ರಮವು ಸಮುದ್ರಾಹಾರ ರಫ್ತು ವಲಯಕ್ಕೆ ದೊಡ್ಡ ಆಸ್ತಿಯಾಗಲಿದೆ ಎಂದು ಅವರು ಹೇಳಿದರು. ಪರಿಸರ-ಲೇಬಲಿಂಗ್ ಸೀಲುಗಳು ಸಮುದ್ರ ಉತ್ಪನ್ನಗಳನ್ನು ಸುಸ್ಥಿರ ವಿಧಾನಗಳ ಮೂಲಕ ಪಡೆಯುವುದನ್ನು ಖಚಿತಪಡಿಸುತ್ತದೆ. ಸುಸ್ಥಿರತೆ ಟ್ಯಾಗ್‍ಗಳನ್ನು ಹೊಂದಿರುವ ಸಮುದ್ರಾಹಾರ ಉತ್ಪನ್ನಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೆಲೆಗಳನ್ನು ಪಡೆಯಲಾಗುತ್ತದೆ.

ಈ ಕ್ರಮವು ದ್ವೀಪದಲ್ಲಿನ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಸುಧಾರಿಸಲು ಮತ್ತು ಜೀವನ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಲಕ್ಷದ್ವೀಪವು ಕಡಲಕಳೆ ಕೃಷಿ ಮತ್ತು ಅಲಂಕಾರಿಕ ಮೀನು ಸಾಕಣೆಗೆ ಹೆಚ್ಚಿನ ಸಾಮಥ್ರ್ಯವನ್ನು ಹೊಂದಿದೆ. ಆಳ ಸಮುದ್ರ ಮೀನುಗಾರಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಮೀನುಗಾರಿಕೆ ಸಚಿವರು ಹೇಳಿದರು.


ನೀತಿ ಆಯೋಗ, ಸಮುದ್ರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ವಿವಿಧ ಮೀನುಗಾರಿಕೆ ಸಂಶೋಧನಾ ಸಂಸ್ಥೆಗಳು ಮತ್ತು ನಬಾರ್ಡ್ ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮತ್ತು ಭಾರತೀಯ ಮೀನುಗಾರಿಕೆ ಸಮೀಕ್ಷೆ ಜಂಟಿಯಾಗಿ ಸಭೆಯನ್ನು ಆಯೋಜಿಸಿದ್ದವು.

ಲಕ್ಷದ್ವೀಪದಲ್ಲಿರುವ ನಾಲ್ಕು ಸಾವಿರ ಚದರ ಮೀಟರ್ ವಿಸ್ತೀರ್ಣದ ಲಗೂನ್ ಕಡಲಕಳೆ ಕೃಷಿಗೆ ತುಂಬಾ ಸೂಕ್ತವಾಗಿದೆ ಎಂದು ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಹೇಳಿದರು. ಜಾಗತಿಕ ಮಟ್ಟದಲ್ಲಿ ಕಡಲಕಳೆ ಕೇಂದ್ರವಾಗುವ ಸಾಮಥ್ರ್ಯವನ್ನು ಲಕ್ಷದ್ವೀಪ ಹೊಂದಿದೆ ಎಂದು ಅವರು ಹೇಳಿದರು.

ಕೇಂದ್ರ ರಾಜ್ಯ ಸಚಿವ ಜಾರ್ಜ್ ಕುರಿಯನ್, ಕೇಂದ್ರ ಮೀನುಗಾರಿಕೆ ಕಾರ್ಯದರ್ಶಿ ಅಭಿಲಕ್ಷ ಲಿಖಿ, ಜಂಟಿ ಕಾರ್ಯದರ್ಶಿ ನೀತು ಕುಮಾರಿ ಪ್ರಸಾದ್, ಲಕ್ಷದ್ವೀಪ ಮೀನುಗಾರಿಕೆ ಕಾರ್ಯದರ್ಶಿ ರಾಜ್ ತಿಲಕ್, ಎಫ್.ಎಸ್.ಐ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಿ. ಕೆ. ಬೆಹೆರಾ ಮತ್ತು ಈSI ಮಹಾನಿರ್ದೇಶಕ ಡಾ. ಕೆ. ಆರ್. ಶ್ರೀನಾಥ್ ಮಾತನಾಡಿದರು.

ಇದಕ್ಕೂ ಮೊದಲು, ಕೇಂದ್ರ ಮೀನುಗಾರಿಕೆ ಕಾರ್ಯದರ್ಶಿ ಕೊಚ್ಚಿ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಬಂದರು ಆಧುನೀಕರಣ, ಕೋಲ್ಡ್ ಚೈನ್, ಪ್ಯಾಕೇಜಿಂಗ್ ಮತ್ತು ಮೌಲ್ಯವರ್ಧಿತ ಉತ್ಪಾದನೆಯಂತಹ ಅಭಿವೃದ್ಧಿ ಕ್ರಮಗಳು ಮೀನುಗಾರರ ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries