HEALTH TIPS

ಗಣೇಶ ಚತುರ್ಥಿಯಲ್ಲಿ ಪಾಲ್ಗೊಂಡ ರಾಜ್ಯಪಾಲರು

ಅಡೂರು: ಮರಾಠಾ ವೆಲ್ಫೇರ್ ಅಸೋಸಿಯೇಷನ್ ನಿನ್ನೆ ಆಯೋಜಿಸಿದ್ದ ಗಣೇಶ ಚತುರ್ಥಿಯಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗಣೇಶ ಮೂರ್ತಿಯ ಮುಂದೆ ರಾಜ್ಯಪಾಲರು ಆರತಿ ಬೆಳಗಿದರು. ಗಣೇಶ ಗೀತೆಗಳನ್ನು ಹಾಡಿ ಪ್ರಸಿದ್ಧ 'ಗಣಪತಿ ಬಪ್ಪಾ ಮೋರಿಯಾ' ಘೋಷಣೆ ಕೂಗಿದರು. 


"ನೀವು ಸುಮಾರು ಸಾವಿರ ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದಿಂದ ಇಲ್ಲಿಗೆ ಬಂದು ನಿಮ್ಮ ಸಂಪ್ರದಾಯ ಮತ್ತು ಸಂಸ್ಕøತಿಯನ್ನು ಉಳಿಸುತ್ತಿರುವುದು ತುಂಬಾ ಶ್ಲಾಘನೀಯ. ಅಷ್ಟೇ ಅಲ್ಲ, ಇಂದು ನೀವು ಕೇರಳದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದೀರಿ. ಕೇರಳದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ನಿಮ್ಮ ಕೊಡುಗೆ ಬಹಳ ಗಮನಾರ್ಹವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಕೇರಳ ಮತ್ತು ಮಹಾರಾಷ್ಟ್ರದ ನಡುವೆ ಸಾಂಸ್ಕೃತಿಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ" ಎಂದು ರಾಜ್ಯಪಾಲರು ಮಾತನಾಡುತ್ತಾ ಹೇಳಿದರು.

'ಗಣಪತಿ ಬಪ್ಪಾ ಮೋರಿಯಾ' ಎಂದು ಕೆತ್ತಿದ ಕೇಸರಿ ಟೋಪಿ ಧರಿಸಿ ರಾಜ್ಯಪಾಲರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮರಾಠಾ ವೆಲ್ಫೇರ್ ಅಸೋಸಿಯೇಷನ್ ಆಯೋಜಿಸಿದ್ದ ಗಣೇಶ ಹಬ್ಬದ ಎಂಟನೇ ವಾರ್ಷಿಕೋತ್ಸವವಾಗಿತ್ತು. ರಾಜ್ಯಪಾಲರ ಉಪಸ್ಥಿತಿಯು ಆಚರಣೆಗೆ ಇನ್ನಷ್ಟು ಮೆರುಗು ನೀಡಿತು. ಕಲಾತ್ಮಕ ಪ್ರದರ್ಶನಗಳು, ಸಾಂಸ್ಕೃತಿಕ ಪ್ರಸ್ತುತಿಗಳು ಮತ್ತು ಭಕ್ತಿಗೀತೆಗಳು ಸಹ ಸಮಾರಂಭದ ಭಾಗವಾಗಿದ್ದವು. ಸಮಾರಂಭವು ಅಡೂರ್‍ನಿಂದ ಪ್ರಾರಂಭವಾಗಿ ಪಂದಳಂನ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ಗಣೇಶ ವಿಗ್ರಹವನ್ನು ಮುಳುಗಿಸುವುದರೊಂದಿಗೆ ಮುಕ್ತಾಯವಾಯಿತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries