HEALTH TIPS

ರೆಡ್‌ ಕಾರ್ನರ್‌ ನೋಟಿಸ್‌ ತ್ವರಿತ ಜಾರಿ: ಸಿಬಿಐ ನಿರ್ದೇಶಕ ಪ್ರವೀಣ್‌ ಸೂದ್‌

 ವದೆಹಲಿ: 'ಗಡಿಪಾರಿನ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯ ಪತ್ತೆ ಮತ್ತು ಬಂಧನಕ್ಕಾಗಿ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸಲು ಇಂಟರ್‌ಪೋಲ್‌ ತೆಗೆದುಕೊಳ್ಳುತ್ತಿದ್ದ ಸಮಯವು ಈಗ ಗಣನೀಯವಾಗಿ ಕಡಿಮೆಯಾಗಿದೆ' ಎಂದು ಸಿಬಿಐ ನಿರ್ದೇಶಕ ಪ್ರವೀಣ್‌ ಸೂದ್‌ ಹೇಳಿದರು.

'ದೇಶಭ್ರಷ್ಟರ ಸ್ಥಳಾಂತರ:ಸವಾಲುಗಳು ಮತ್ತು ತಂತ್ರಗಳು' ಎಂಬ ವಿಷಯದ ಕುರಿತು ಸಿಬಿಐ ಗುರುವಾರ ಇಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾರ್ಯಕ್ರಮ ಉದ್ಘಾಟಿಸಿದರು.


'ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೊಳಿಸುವಂತೆ ಸಿಬಿಐ ಸಲ್ಲಿಸಿರುವ ಎಂಟು ಮನವಿಗಳು ಮಾತ್ರ ಸದ್ಯ ಇಂಟರ್‌ಪೋಲ್‌ನಲ್ಲಿ ಬಾಕಿ ಉಳಿದಿವೆ' ಎಂದು ಪ್ರವೀಣ್‌ ಸೂದ್‌ ಹೇಳಿದರು.

ಅ‍ಪ‍ರಾಧ ಕೃತ್ಯಗಳಲ್ಲಿ ಬೇಕಾಗಿರುವ ವ್ಯಕ್ತಿಗಳನ್ನು ಹಸ್ತಾಂತರಿಸುವಂತೆ ಭಾರತವು ವಿವಿಧ ದೇಶಗಳಿಗೆ ಸಲ್ಲಿಸಿರುವ 338 ಮನವಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಈ ವರ್ಷದಲ್ಲಿ ಇದುವರೆಗೆ, ದೇಶದಿಂದ ಪಲಾಯನ ಮಾಡಿದ 35 ಅಪರಾಧಿಗಳನ್ನು ವಾಪಸ್‌ ಭಾರತಕ್ಕೆ ತರಲಾಗಿದೆ' ಎಂದು ಸೂದ್‌ ಹೇಳಿದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries