HEALTH TIPS

ಕಡಂಬಾರ್: ಸಾಲಬಾಧೆ- ದಂಪತಿಗಳ ಆತ್ಮಹತ್ಯೆ

ಮಂಜೇಶ್ವರ:   ಸಾಲ ಬಾಧೆಯಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತಿದ್ದ ದಂಪತಿಗಳು ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ತಡರಾತ್ರಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಮಂಜೇಶ್ವರ ಕಡಂಬಾರು ಜಂಭದ ಪದವು ಅಯ್ಯಪ್ಪ ಮಂದಿರದ ಎದುರಿನಲ್ಲಿ ವಾಸವಾಗಿರುವ ಅಜಿತ್ ಹಾಗೂ ಅವರ ಪತ್ನಿ ಶ್ವೇತಾ ವಿಷ ಸೇವಿಸಿ ಆತ್ಮಹತ್ಯೆಗೈದ ದಂಪತಿಗಳು. 
ಶ್ವೇತಾ ಶಾಲೆಯೊಂದರಲ್ಲಿ ಅದ್ಯಾಪಿಕೆಯಾಗಿದ್ದರು.
ಇವರಿಗೆ ಮೂರರ  ಹರೆಯದ ಮಗುವೊಂದು ಇದ್ದು  ಈ ಮಗುವನ್ನು ಅಜಿತ್ ನ ಸಹೋದರಿಯ ಮನೆಯಲ್ಲಿ ಬಿಟ್ಟು ಮನೆಗೆ ಬಂದು ಕೀಟನಾಶಕ ಸೇವಿಸಿ ಅತ್ಮಹತ್ಯೆಗೈದಿದ್ದಾರೆ.
ಅಜಿತ್ ಭಾರೀ ಮೊತ್ತದ ಸಾಲಗಾರನಾಗಿದ್ದು ಮಾತ್ರವಲ್ಲ ಬಡ್ಡಿ ದಂಧೆಯವರಿಂದ ನಿರಂತರ ಕಿರುಕುಳ ಇತ್ತೆಂದು ಹೇಳಲಾಗುತಿದ್ದು, ಬ್ಲೇಡ್ ಮಾಫಿಯಾದ ಕಿರುಕುಳವೇ ಅತ್ಮಹತ್ಯೆಗೆ ಕಾರಣವೆನ್ನಲಾಗಿದೆ.ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries