ಪೆರ್ಲ: ಕಾಸರಗೋಡು ಜಿಲ್ಲಾ ಕಾನೂನು ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಮತ್ತು ಐಕ್ಯೂ ಎಸಿ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ರಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ವಕೀಲ ಕೃಪೇಶ್ ಕಾರಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಗತಿ ನೀಡಿ, ರಾಗಿಂಗ್ ನಿಂದ ಮಕ್ಕಳು ಎದುರಿಸುವ ದೈಹಿಕ ಮತ್ತು ಮಾನಸಿಕ ಸಮಸ್ಯೆ ಹಾಗೂ ಪರಿಣಾಮಗಳ ಬಗ್ಗೆ ತಿಳಿಸಿದರು. ಕಾನೂನಾತ್ಮಕವಾಗಿ ರಾಗಿಂಗ್ ಎದುರಿಸಲು ನಿರ್ದೇಶ ಹಾಗೂ ಪರಿಹಾರ ಮಾರ್ಗವನ್ನು ಸೂಚಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಷಿತ್ ಕೆ., ಐಕ್ಯೂಎಸಿ ಸಂಯೋಜಕಿ ನಯನಾ ಉಪಸ್ಥಿತರಿದ್ದರು. ಆಂಟಿ ರಾಗಿಂಗ್ ಸೆಲ್ ಸಂಯೋಜಕಿ ವಿನೀಶ ಸ್ವಾಗತಿಸಿದರು. ಕಾಸರಗೋಡು ಪಿಎಲ್ ವಿಯ ಡಿಎ???ಸ್ ಎ ಕೃಷ್ಣವೇಣಿ ವಂದಿಸಿದರು. ವಿದ್ಯಾರ್ಥಿನಿ ಆಯಿಷತ್ ಇಸಾನಾ ನಿರೂಪಿಸಿದರು.

.jpg)
