HEALTH TIPS

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದರೆ ಇನ್ನು ಪ್ರವೇಶ ಇರದು: ಕೇರಳ ವಿಶ್ವವಿದ್ಯಾಲಯದ ಕುಲಪತಿ ಸುತ್ತೋಲೆ: ಕ್ರಮದ ವಿರುದ್ಧ ಎಸ್‍ಎಫ್‍ಐ ಪ್ರತಿಭಟನೆ

ತಿರುವನಂತಪುರಂ: ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿದ್ದರೆ ಪ್ರವೇಶ ನೀಡಲಾಗುವುದಿಲ್ಲ ಎಂಬ ನಿರ್ಧಾರವನ್ನು ಕೇರಳ ಕುಲಪತಿ ಮುಂದಿಟ್ಟಿದ್ದಾರೆ. ಈ ವಿಷಯದ ಕುರಿತು ಕಾಲೇಜುಗಳಿಗೆ ಕುಲಪತಿ ಮೋಹನ್ ಕುನ್ನುಮ್ಮಲ್ ಸುತ್ತೋಲೆ ಕಳುಹಿಸಿದ್ದಾರೆ.

ಪ್ರವೇಶ ಬಯಸುವವರು ತಾವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳುವ ಅಫಿಡವಿಟ್ ನೀಡಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅವರು ಅಫಿಡವಿಟ್ ಉಲ್ಲಂಘಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದರೆ ಕ್ರಮ ಕೈಗೊಳ್ಳಬಹುದು. ಅಫಿಡವಿಟ್‍ನಲ್ಲಿ ನಾಲ್ಕು ಪ್ರಶ್ನೆಗಳಿವೆ.   

ಅವರನ್ನು ಕಾಲೇಜುಗಳಿಂದ ಡಿಬಾರ್ ಮಾಡಲಾಗಿದೆಯೇ? ಅವರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆಯೇ? ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾರೆಯೇ? ಅವರು ಪರೀಕ್ಷಾ ದುಷ್ಕøತ್ಯದಲ್ಲಿ ಭಾಗಿಯಾಗಿದ್ದಾರೆಯೇ? ಎಂದು ಪ್ರಶ್ನೆಗಳಾಗಿವೆ.

ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಸುತ್ತೋಲೆಯನ್ನು ಉಲ್ಲಂಘಿಸಿದರೆ ಕಾಲೇಜು ಮಂಡಳಿಯು ಕ್ರಮ ಕೈಗೊಳ್ಳಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಇದೇ ವೇಳೆ, ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಪಿ.ಎಸ್. ಸಂಜೀವ್ ಕ್ರಮವನ್ನು ಪ್ರತಿಭಟಿಸಲು ಮುಂದೆ ಬಂದಿರುವರು. ಐತಿಹಾಸಿಕ ನಿರಾಕರಣೆ ಆದೇಶಗಳನ್ನು ಸಾರ್ವಜನಿಕರು ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು ಎಸ್‍ಎಫ್‍ಐ ಫೇಸ್‍ಬುಕ್ ಪೋಸ್ಟ್‍ನಲ್ಲಿ ತಿಳಿಸಿದೆ. ಉಪಕುಲಪತಿಗಳ ಕ್ರಮದ ವಿರುದ್ಧ ಬಲವಾದ ಪ್ರತಿಭಟನೆಗಳು ನಡೆಯಲಿವೆ ಎಂದು ಪಿ.ಎಸ್. ಸಂಜೀವ್ ಹೇಳಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries