HEALTH TIPS

ಕೆಯುಡಬ್ಲ್ಯೂಜೆ ಚುನಾವಣಾಧಿಕಾರಿಯಾಗಿ ರವಿ ನಾಯ್ಕಾಪು ನೇಮಕ

ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)ದ 2025-28 ನೇ ಸಾಲಿನ ಚುನಾವಣೆಗೆ ಆಖಾಡ ಸಿದ್ಧವಾಗಿದ್ದು, ಕಾಸರಗೋಡು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾಧಿಕಾರಿಯಾಗಿ ರವಿ ನಾಯ್ಕಾಪು ಅವರನ್ನು ನೇಮಿಸಿ ಸಂಘದ ರಾಜ್ಯ ಸಮಿತಿಯು ಆದೇಶ ಹೊರಡಿಸಿದೆ. 

ಚುನಾವಣೆ ನಿಯಮಗಳನ್ವಯ ಹಾಗೂ ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಿಕೊಡಲು ಆದೇಶದಲ್ಲಿ ಸೂಚಿಸಲಾಗಿದ್ದು, ಈಗಾಗಲೇ ನೀತಿ ಸಂಹಿತೆ ಜ್ಯಾರಿಗೊಳಿಸಲಾಗಿದೆ.   ಅಕ್ಟೊಬರ 13ರಂದು ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ನವಂಬರ ಒಂಬತ್ತರ ವರೆಗೆ ಮುಂದುವರಿಯಲಿದೆ.  ಕಾಸರಗೋಡು ಜಿಲ್ಲಾ ಸಮಿತಿಯ ಚುನಾವಣೆಯನ್ನು ಕಾನೂನಾತ್ಮಕವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರೂ ಸಹಕರಿಸುವಂತೆ ನಿಯುಕ್ತ ಚುನಾವಣಾ ಅಧಿಕಾರಿ ರವಿ ನಾಯ್ಕಾಪು ಅವರು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries