ಕೋಝಿಕ್ಕೋಡ್: ವಯನಾಡ್ ಸಂಸದೆ ಮತ್ತು ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬೆಂಗಾವಲು ತಂಡದಲ್ಲಿ ಬುಧವಾರ ಸಂಜೆ ಭದ್ರತಾ ಲೋಪ ಕಂಡುಬಂದಿದೆ.
ಬೆಂಗಾವಲು ತಂಡ ದಾರಿ ತಪ್ಪಿದ ನಂತರ, ಸಂಸದರು ಪ್ರಯಾಣಿಸುತ್ತಿದ್ದ ವಾಹನ ಅಗಸ್ತ್ಯನ್ಮುಳಿ ಮಾರುಕಟ್ಟೆಯಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿತು. ಮಲಪ್ಪುರಂನಿಂದ ಕೋಝಿಕ್ಕೋಡ್ಗೆ ಹೋಗುವ ದಾರಿಯಲ್ಲಿ ವಾಹನ ದಾರಿ ತಪ್ಪಿತು. ಮುಕ್ಕಂನಿಂದ ಅಗಸ್ತ್ಯನ್ಮುಳಿ ಮೂಲಕ ತಿರುವಂಬಾಡಿ ರಸ್ತೆಯಲ್ಲಿ ವಾಹನ ಸಂಚರಿಸಿತ್ತು.
ಆದಾಗ್ಯೂ, ಬೆಂಗಾವಲು ವಾಹನಗಳು ತಾಮರಸ್ಸೇರಿ ರಸ್ತೆಯ ಕಡೆಗೆ ತಪ್ಪು ದಿಕ್ಕಿನಲ್ಲಿ ತಿರುಗಿದವು, ಇದರಿಂದಾಗಿ ಇಡೀ ಬೆಂಗಾವಲು ತಂಡ ಗೊಂದಲಕ್ಕೀಡಾಯಿತು. ಭದ್ರತಾ ಪಡೆಗಳು ಪೋಲೀಸರಿಗೆ ಮಾಹಿತಿ ನೀಡುವ ಹೊತ್ತಿಗೆ, ಮುಂಭಾಗದಲ್ಲಿದ್ದ ವಾಹನಗಳು ಸುಮಾರು ನೂರು ಮೀಟರ್ ಮುಂದೆ ಸಾಗಿದ್ದವು. ನಂತರ, ವಾಹನಗಳು ಹಿಮ್ಮುಖವಾಗಿ ಸರಿಯಾದ ಮಾರ್ಗದಲ್ಲಿ ತಮ್ಮ ಪ್ರಯಾಣವನ್ನು ಮುಂದುವರಿಸಿದವು. ಈ ಸಮಯದಲ್ಲಿ, ಪ್ರಿಯಾಂಕಾ ಗಾಂಧಿ ಅವರ ವಾಹನವು ಅಗಸ್ತ್ಯನ್ಮುಳಿ ಮಾರುಕಟ್ಟೆಯಲ್ಲಿ ಸ್ವಲ್ಪ ಸಮಯದವರೆಗೆ ಸಿಲುಕಿಕೊಂಡಿದ್ದು, ತೀವ್ರ ಟ್ರಾಫಿಕ್ ಜಾಮ್ ಉಂಟಾಯಿತು.
ಮಂಗಳವಾರವೇ ಭದ್ರತಾ ಸಂಸ್ಥೆಗಳು ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಘೋಷಿಸಿದ್ದರೂ, ರಸ್ತೆ ನಿಯಂತ್ರಣದಲ್ಲಿನ ಲೋಪಗಳಿಂದಾಗಿ ಈ ಘಟನೆ ಸಂಭವಿಸಿರುವ ಸೂಚನೆಗಳು ಕಂಡುಬಂದಿವೆ.
ಘಟನೆಯನ್ನು ಪರಿಗಣಿಸಿ ಜಿಲ್ಲಾ ಪೆÇಲೀಸ್ ಮುಖ್ಯಸ್ಥರು ವರದಿ ಕೋರಿದ್ದಾರೆ ಎಂದು ತಿಳಿದುಬಂದಿದೆ. ಭದ್ರತಾ ಲೋಪದ ಬಗ್ಗೆ ವಿವರವಾದ ತನಿಖೆ ನಡೆಸುವ ಕಾರ್ಯವನ್ನು ವಿಶೇಷ ಶಾಖೆಗೆ ವಹಿಸಲಾಗಿದೆ.




