HEALTH TIPS

ಮತದಾರರ ಪಟ್ಟಿಯ ವಿಶೇಷ ತೀವ್ರ ನವೀಕರಣ: ರಾಜಕೀಯ ಪಕ್ಷಗಳ ಸಭೆ

ತಿರುವನಂತಪುರಂ: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ನವೀಕರಣ (ಎಸ್.ಐ.ಆರ್) ಅನುಷ್ಠಾನದ ಕುರಿತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಭೆ ತಿರುವನಂತಪುರಂನ ಹಯಾತ್ ರೀಜೆನ್ಸಿಯಲ್ಲಿ ನಡೆಯಿತು. ವಿಶೇಷ ತೀವ್ರ ನವೀಕರಣ ಯೋಜನೆಯ ತರಬೇತಿ ಚಟುವಟಿಕೆಗಳು ನವೆಂಬರ್ 3 ರವರೆಗೆ ಮುಂದುವರಿಯಲಿವೆ. ಮನೆ-ಮನೆಗೆ ತೆರಳಿ ದತ್ತಾಂಶ ಸಂಗ್ರಹ ಹಂತ (ಗಣತಿ ನಮೂನೆಗಳ ವಿತರಣೆ) ನವೆಂಬರ್ 4 ರಿಂದ ಡಿಸೆಂಬರ್ 4 ರವರೆಗೆ ನಡೆಯಲಿದೆ. 


ಡಿಸೆಂಬರ್ 9 ರಂದು ಪ್ರಾಥಮಿಕ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಇದರ ಕುರಿತು ವಿಚಾರಣೆ ಮತ್ತು ಪರಿಶೀಲನೆ ಡಿಸೆಂಬರ್ 9 ರಿಂದ ಜನವರಿ 31, 2026 ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 7, 2026 ರಂದು ಪ್ರಕಟಿಸಲಾಗುವುದು. ಈ ವರ್ಷ ಅಕ್ಟೋಬರ್ 27 ರಂದು ಜಾರಿಯಲ್ಲಿರುವ ಮತದಾರರ ಪಟ್ಟಿಯ ಪ್ರಕಾರ ಎಲ್ಲಾ ಮತದಾರರಿಗೆ ಎಣಿಕೆ ನಮೂನೆಗಳನ್ನು ವಿತರಿಸಲಾಗುವುದು.

ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ರಾಜಕೀಯ ಪಕ್ಷಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಬೂತ್ ಮಟ್ಟದ ಏಜೆಂಟ್‍ಗಳನ್ನು ನೇಮಿಸುವಂತೆ ಮುಖ್ಯ ಚುನಾವಣಾಧಿಕಾರಿ ಕೇಳಿದ್ದಾರೆ.

ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಪ್ರತಿ ವಾರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಭೆ ನಡೆಯಲಿದೆ ಎಂದು ಡಾ. ರತನ್ ಯು ಕೇಳ್ಕಲ್ ತಿಳಿಸಿದ್ದಾರೆ.

ಅಡ್ವ. ಎಸ್ ಸುರೇಶ್ (ಭಾರತೀಯ ಜನತಾ ಪಕ್ಷ), ಎಂ ವಿ ಜಯರಾಜನ್ (ಭಾರತೀಯ ಕಮ್ಯುನಿಸ್ಟ್ ಪಕ್ಷ ಮಾಕ್ಸ್ರ್ವಾದಿ) ಶಾಸಕ ಸನ್ನಿ ಜೋಸೆಫ್, ಶಾಸಕ ಪಿ ಸಿ ವಿಷ್ಣುನಾಥ್, ಶಾಸಕ ಎಂ ಲಿಜು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಸತ್ಯನ್ ಮೊಕೇರಿ (ಭಾರತೀಯ ಕಮ್ಯುನಿಸ್ಟ್ ಪಕ್ಷ), ಸಿ. ಪಿ. ಚೆರಿಯಾ ಮುಹಮ್ಮದ್ (ಭಾರತೀಯ ಯೂನಿಯನ್ ಮುಸ್ಲಿಂ ಲೀಗ್), ಜಾಯ್ ಅಬ್ರಹಾಂ (ಕೇರಳ ಕಾಂಗ್ರೆಸ್), ಡಾ. ಸ್ಟೀಫನ್ ಜಾರ್ಜ್ ಕೆಸಿ (ಕೇರಳ ಕಾಂಗ್ರೆಸ್. ಎಂ) ಪಿ ಜಿ ಪ್ರಸನ್ನ ಕುಮಾರ್ ಮತ್ತು ಕೆ ಎಸ್ ಸನಲ್ ಕುಮಾರ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ) ಸಭೆಯಲ್ಲಿ ಭಾಗವಹಿಸಿದ್ದರು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries