HEALTH TIPS

‘ನಾನು ನೀನಾಗಿರುವೆ’ ತತ್ವಮಸಿಗೆ ಹೊಸ ವ್ಯಾಖ್ಯೆ ಬರೆದ ದೇವಸ್ವಂ ಸಚಿವ ವಿ.ಎನ್. ವಾಸವನ್!

ಪತ್ತನಂತಿಟ್ಟ: ತತ್ವಮಸಿ ಪದದ ಅರ್ಥವೇ ತಿಳಿದಿಲ್ಲದ ದೇವಸ್ವಂ ಸಚಿವರು ಹೊಸ ವ್ಯಾಖ್ಯ ಬರೆದು ಬೋಳೆತನ ಮೆರೆದಿದ್ದಾರೆ.

ದೇವಸ್ವಂ ಸಚಿವ ವಿ.ಎನ್. ವಾಸವನ್ ತತ್ವಮಸಿ ಪದದ ಅರ್ಥವನ್ನು ‘ಅದು ನೀನಾಗುವಿ’ ಬದಲಿಗೆ ‘ನಾನು ನೀನಾಗುವೆ’ ಎಂದು ವ್ಯಾಖ್ಯಾನಿಸಿದರು. ಪತ್ತ ನಂತಿಟ್ಟದಲ್ಲಿ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ದೇವಸ್ವಂ ಮಂಡಳಿಯ ಕಚೇರಿಯನ್ನು ಕೆಡವಿದ ವಿರುದ್ಧ ಎಲ್‌ಡಿಎಫ್ ಶನಿವಾರ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸುತ್ತಾ ಅವರು ಮಾತನಾಡಿದರು.

“ಶಬರಿಮಲೆಗೆ ಹೋದವರಿಗೆ ಅಲ್ಲಿ ಮೊದಲು ಕಾಣಿಸುವುದು  'ತತ್ವಮಸಿ' ಎಂದು ಬರೆದಿರುವ ಮಹಾವಾಕ್ಯ. ಅದರ ಅರ್ಥ ನಾನು ನೀನಾಗುವಿ ಎಂದಾಗಿದೆ. ಶಬರಿಮಲೆಗೆ ಬರುವ ಪ್ರತಿಯೊಬ್ಬ ಭಕ್ತರೂ ಅಯ್ಯಪ್ಪನಾಗುತ್ತಾನೆ. ಅಯ್ಯಪ್ಪ ಮತ್ತು ಭಕ್ತನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬ ಸಂದೇಶವನ್ನು ಸಾಕಾರಗೊಳಿಸುವ ವಿಶ್ವದ ಏಕೈಕ ತೀರ್ಥಯಾತ್ರಾ ಕೇಂದ್ರ ಶಬರಿಮಲೆ ಎಂದು ನಾವು ಹೆಮ್ಮೆಯಿಂದ ಎತ್ತಿ ತೋರಿಸುತ್ತೇವೆ” ಎಂದು ಸಚಿವರು ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries