ಕಾಸರಗೋಡು: ಬೇಕಲದ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಐದನೆಯ ದೀಪಾವಳಿ ಸಂಗೀತೋತ್ಸವದಲ್ಲಿ ಎ.ಅನಂತ ಪದ್ಮನಾಭನ್ ಅವರ ವೀಣಾ ಕಛೇರಿ ಪ್ರೇಕ್ಷಕರಿಗೆ ರಸದೌತಣ ನೀಡಿತು. ಕರ್ನಾಟಕ, ಹಿಂದೂಸ್ತಾನಿ, ಪಾಶ್ಚಾತ್ಯ ಸಂಗೀತವನ್ನು ಏಕಕಾಲದಲ್ಲಿ ಕೇಳುವಾಗ ಅದು ಸಂಗೀತದ ತ್ರಿವೇಣಿ ಸಂಗಮವಾಗಿತ್ತು. ನಾಟ್ಟ, ಗಾನಮೂರ್ತಿ, ಸರಸ್ವತಿ, ಕಪಿ, ಸಿಂಧು ಭೈರವಿ ರಾಗಗಳಲ್ಲಿ ಕೀರ್ತನೆಗಳನ್ನು ತಮ್ಮದೇ ಶೈಲಿಯಲ್ಲಿ ವೀಣೆ ನುಡಿಸಿದರು. ಪಕ್ಕ ವಾದ್ಯದಲ್ಲಿ ಚೇರ್ತಲ ದಿನೇಶ್ ಮೃದಂಗ, ಡಾ.ಸುರೇಶ್ ವೈದ್ಯನಾಥನ್ ಘಟನಲ್ಲಿ ಸಹಕರಿಸಿದರು. ಪಯ್ಯನ್ನೂರು ಗೋವಿಂದ ಪ್ರಸಾದ್ ಮೋರ್ಸಿಂಗ್ ನುಡಿಸಿದರು.
ಕಲಾವತಿಯವರ ಸೋಪಾನ ಸಂಗೀತ, ಬದರಿ ವಿಶ್ವನಾಥ್ ಅವರ ಸಂಗೀತೋತ್ಸವದೊಂದಿಗೆ ಐದನೇ ದಿನದ ಸಂಗೀತೋತ್ಸವ ಆರಂಭವಾಯಿತು. ವರುಣ ಲಕ್ಷ್ಮಿ, ವಿದ್ಯಾ ಹರಿಕೃಷ್ಣ, ಯೋಗ ಕೀರ್ತನೆ, ರಮ್ಯಾ ನಂಬೂತಿರಿ, ಹೃದಯೇಶ್ ಕೃಷ್ಣನ್, ಮಾತಂಗಿ ಸತ್ಯಮೂರ್ತಿ ಮತ್ತು ಎನ್.ಜೆ.ನಂದಿನಿ ಅವರಿಂದ ಸಂಗೀತ ಕಛೇರಿಗಳು, ಯೋಗ ವಂದನಾ ಅವರಿಂದ ವೀಣಾ ಕಛೇರಿ, ಮತ್ತು ಘಟ ವಿದ್ವಾಂಸ ಡಾ. ಸುರೇಶ್ ವೈದ್ಯನಾಥನ್ ಅವರ ಮೃತ್ತಿಕಾ ವೈಭವ ಎಂಬ ತಾಳವಾದ್ಯ ಸಂಗಮವು ನಂದಿಮಂಟಪದಲ್ಲಿ ಜರಗಿತು.
(ಅ.25)ಇಂದು ಸಂಗೀತೋತ್ಸವದಲ್ಲಿ.
ಮೈಸೂರು ಸಹನಾ ಅವರಿಂದ ವೀಣಾ ಕಛೇರಿ, ನಂತರ ಕಮಲಾ ದೀಪ್ತಿ, ಅಕ್ಷಯ್ ಪದ್ಮನಾಭನ್, ಅಭಿರಾಮಿ ಅಜಯ್, ಪಾರ್ವತಿ ಅಜಯ್, ಅರ್ಚನಾ ಆರತಿ ಚೆನ್ನೈ, ಮಹಾಲಕ್ಷ್ಮಿ ಶೆಣೈ ಮತ್ತು ಅಜಿತ್ ಸುಬ್ರಮಣ್ಯಂ ಅವರಿಂದ ಹಿಂದೂಸ್ತಾನಿ ಸಂಗೀತ ಕಛೇರಿ, ಅನಿಲಕ್ಕಾಡ್ ಸಹೋದರಿಯರಿಂದ ಪಿಟೀಲು ಕಛೇರಿ ಮತ್ತು ನಡುಂಬಳ್ಳಿ ರಾಮ ಮೋಹನ್, ಮೀರಾ ರಾಮ ಮೋಹನ್ ಅವರ ಕಾರ್ನಾಟಿಕ್- ಕಥಕ್ಕಳಿ ಸಮನ್ವಯ ನಡೆಯಲಿದೆ.

.jpg)
