HEALTH TIPS

ತಮಿಳುನಾಡು ಮತ್ತು ಕರ್ನಾಟಕದಲ್ಲಿಲ್ಲದ ಅಮೀಬಿಕ್ ಎನ್ಸೆಫಾಲಿಟಿಸ್ ಕೇರಳದಲ್ಲೇಕಿದೆ?: ಇದನ್ನು ಅರ್ಥಮಾಡಿಕೊಳ್ಳದೆ ವೈದ್ಯರ ವಿರುದ್ಧ ತಿರುಗಿ ಬೀಳುವುದರಲ್ಲಿ ಅರ್ಥವಿಲ್ಲ: ಡಾ. ಹ್ಯಾರಿಸ್ ಚಿರಕ್ಕಲ್

ಕೋಝಿಕೋಡ್: ನೆರೆಯ ರಾಜ್ಯಗಳಿಗಿಂತ ಭಿನ್ನವಾಗಿ ಕೇರಳದಲ್ಲಿ ಮಾತ್ರ ಅಮೀಬಿಕ್ ಎನ್ಸೆಫಾಲಿಟಿಸ್ ವರದಿಯಾಗಲು ಕಾರಣ ಏನೆಂದು ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಹ್ಯಾರಿಸ್ ಚಿರಕ್ಕಲ್ ಕೇಳಿದ್ದಾರೆ. ವೈದ್ಯರು ಫೇಸ್‍ಬುಕ್ ಪೋಸ್ಟ್ ಮೂಲಕ ಗಮನಾರ್ಹ ಪ್ರಶ್ನೆಗಳನ್ನೆತ್ತಿದ್ದಾರೆ. 

'ಕಸಾಯಿಖಾನೆ ತ್ಯಾಜ್ಯ, ಹೋಟೆಲ್ ತ್ಯಾಜ್ಯ ಮತ್ತು ಸೆಪ್ಟಿಕ್ ಟ್ಯಾಂಕ್ ತ್ಯಾಜ್ಯವನ್ನು ಕೆರೆಗಳು ಮತ್ತು ನದಿಗಳಲ್ಲಿ ಸುರಿಯುವುದರಿಂದ ಉಂಟಾಗುವ ವೆಚ್ಚವನ್ನು ಇಂತಹ ರೋಗಗಳ ಮೂಲಕ ಮರುಪಡೆಯಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಇಲಿಜ್ವರ, ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಜ್ವರದಂತಹ ರೋಗಗಳು ಮತ್ತು ರೇಬೀಸ್ ಗೆ ಕಾರಣವಾಗುವ  ಬೀದಿ ನಾಯಿಗಳು ಇವೆಲ್ಲವೂ ಕೊಳೆಯ ಸೂಚಕಗಳಾಗಿವೆ. ಇದನ್ನು ಪರಿಹರಿಸುವುದು ಸಮಾಜದ ಏಕೈಕ ಜವಾಬ್ದಾರಿಯಾಗಿದೆ. ರೋಗದ ಚಿಕಿತ್ಸೆ ಫಲಕಾರಿಯಾಗದೆ ಬಳಿಕ ವೈದ್ಯರ ಮೇಲೆ ಹಲ್ಲೆ ನಡೆಸುವುದು, ವ್ಯಾಪಕವಾಗಿ ಟೀಕಿಸುವುದರಲ್ಲಿ ಅರ್ಥವಿಲ್ಲ' ಎಂದು ವೈದ್ಯರು ಹೇಳಿದ್ದಾರೆ.  










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries