ನಾಗರಿಕರ ದೂರುಗಳಿಗೆ ಪ್ರತಿಯಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಜನರು ದೂರು ನೀಡುವುದು ದೇಶದಾದ್ಯಂತ ಟೆಲಿಕಾಂ ದುರುಪಯೋಗವನ್ನು ತಡೆಯುವ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
TRAI DND ಅಪ್ಲಿಕೇಶನ್ಗಳ ಮೂಲಕ ವಂಚನೆಯ ಕರೆಗಳು ಮತ್ತು SMSಗಳ ಬಗ್ಗೆ ದೂರು ನೀಡಲು TRAI ನಾಗರಿಕರಿಗೆ ಒತ್ತಾಯಿಸಿದೆ. ಈ ಆಪ್ ಮೂಲಕ ದೂರು ನೀಡಿದಾಗ TRAI ಮತ್ತು ಟೆಲಿಕಾಂ ಕಂಪೆನಿಗಳು ಆ ಸಂಖ್ಯೆಯನ್ನು ಪತ್ತೆ ಹಚ್ಚಿ ಪರಿಶೀಲಿಸಲು ಮತ್ತು ಶಾಶ್ವತವಾಗಿ ಸಂಪರ್ಕ ಕಡಿತಗೊಳಿಸಲು ಸಾಧ್ಯವಾಗುತ್ತದೆ ಎಂದು TRAI ತಿಳಿಸಿದೆ.




