HEALTH TIPS

ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ಮೊಹಮ್ಮದ್ ಶರ್ಷದ್ ಗೆ ರಿಮಾಂಡ್

ಕೊಚ್ಚಿ: ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ಮೊಹಮ್ಮದ್ ಶರ್ಷದ್ ಅವರನ್ನು ರಿಮಾಂಡ್ ಮಾಡಲಾಗಿದೆ. ಶರ್ಷದ್ ಅವರನ್ನು ಎರ್ನಾಕುಳಂ ಎಸಿಜೆಎಂ ನ್ಯಾಯಾಲಯ ರಿಮಾಂಡ್ ಮಾಡಿದೆ.

ಶರ್ಷದ್ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ಪೆÇಲೀಸರು ಮುಂದಾಗಿದ್ದಾರೆ. ಸೋಮವಾರ ಇದಕ್ಕಾಗಿ ಕಸ್ಟಡಿ ಅರ್ಜಿ ಸಲ್ಲಿಸಲಾಗುವುದು. ಕೊಚ್ಚಿ ನಿವಾಸಿಗಳಿಗೆ 40 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ಕೊಚ್ಚಿ ದಕ್ಷಿಣ ಶರ್ಷದ್ ಅವರನ್ನು ಬಂಧಿಸಲಾಗಿದೆ.

ಪೆಂಟಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಮೂಲಕ ಹೆಚ್ಚಿನ ಲಾಭ ಮತ್ತು ಷೇರುದಾರಿಕೆಯ ಭರವಸೆ ನೀಡಿ ವಂಚನೆ ಮಾಡಲಾಗಿದೆ.

ಆಗಸ್ಟ್‍ನಲ್ಲಿ ಕೊಚ್ಚಿ ನಿವಾಸಿಯೊಬ್ಬರು ಸಲ್ಲಿಸಿದ ದೂರಿನ ಆಧಾರದ ಮೇಲೆ ಬಂಧನ ಮಾಡಲಾಗಿದೆ. ಹೆಚ್ಚಿನ ದೂರುಗಳಿವೆ ಎಂಬ ಮಾಹಿತಿ ಪೆÇಲೀಸರಿಗೆ ಸಿಗುತ್ತಿದೆ. ಕಂಪನಿಯ ಸಹ-ಸಂಸ್ಥಾಪಕ, ಚೆನ್ನೈ ನಿವಾಸಿ ಸರವಣನ್‍ಗಾಗಿ ಪೋಲೀಸರು ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries