ಪತ್ತನಂತಿಟ್ಟ: ಪಂಪಾ, ಶಬರಿಮಲೆ ಸನ್ನಿಧಿ ಮತ್ತು ಎರುಮೇಲಿಯಲ್ಲಿ ರಾಸಾಯನಿಕ ಕಲಬೆರಕೆಯ ಕುಂಕುಮ ಮಾರಾಟವನ್ನು ಹೈಕೋರ್ಟ್ ನಿಷೇಧಿಸಿದೆ.
ದೇವಸ್ವಂ ಪೀಠವು ಉತ್ಪನ್ನಗಳನ್ನು ಪರಿಸರಕ್ಕೆ ಹಾನಿಕಾರಕ ಎಂದು ನಿರ್ಣಯಿಸಿದೆ. 15 ರಂದು ಮಂಡಲ - ಮಕರ ಬೆಳಕು ಋತು ಪ್ರಾರಂಭವಾಗಲಿರುವ ಕಾರಣ ನಿಷೇಧ ಹೇರಲಾಗಿದೆ.
ಶಬರಿಮಲೆಯಲ್ಲಿ ಪ್ಲಾಸ್ಟಿಕ್ ಶಾಂಪೂ ಸ್ಯಾಚೆಟ್ಗಳ ಮೇಲೆ ಹೈಕೋರ್ಟ್ ನಿಷೇಧ ಹೇರಿದೆ. ವಿಭಾಗೀಯ ಪೀಠವು ಶಾಂಪೂ ಸ್ಯಾಚೆಟ್ಗಳ ಮಾರಾಟ ಮತ್ತು ಬಳಕೆಯನ್ನು ನಿಬರ್ಂಧಿಸಿದೆ. ಪಂಪಾ ನದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ದೇವಸ್ವಂ ಪೀಠವು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದೆ.




