ಮಂಜೇಶ್ವರ: ಪಾವೂರು ಮುಡಿಮಾರು ಶ್ರೀಮಲರಾಯ ಗುಳಿಗ ದೈವಗಳ ವಾರ್ಷಿಕ ನೇಮೋತ್ಸವ ಡಿ. 26ರಂದು ನಡೆಯಲಿರುವುದು. ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಮಲರಾಯ ದೈವದ ಪ್ರಧಾನ ಅರ್ಚಕ ಚಂದ್ರಹಾಸ ಪೂಜಾರಿ ಮುಡಿಮಾರು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಕ್ಷೇತ್ರದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ, ರವಿ ಮುಡಿಮಾರು, ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆಯ ಅಧ್ಯಕ್ಷ ಚಂದ್ರಹಾಸ ಕೆದುಂಬಾಡಿ, ಕೋಶಾಧಿಕಾರಿ ಮೋಹನ್ ಮುಡಿಮಾರು, ಸದಸ್ಯರಾದ ನವೀನ್ ಮುಡಿಮಾರು, ದೇವದಾಸ್ ಮುಡಿಮಾರು, ಪ್ರಕಾಶ್ ಕುಮಾರ್ ಮುಡಿಮಾರು, ಉಮೇಶ್ ಮುಡಿಮಾರು, ಶಿವರಾಮ ಮುಡಿಮಾರು, ನಾರಾಯಣ ಮುಡಿಮಾರು,ಮಿಥಿಲ್ ಮುಡಿಮಾರ್ ಮೊದಲಾದವರು ಉಪಸ್ಥಿತರಿದ್ದರು.





