HEALTH TIPS

ಪಾಲತ್ತಾಯಿ ಅತ್ಯಾಚಾರ ಪ್ರಕರಣ: ಕೆ. ಪದ್ಮರಾಜನ್ ಶಿಕ್ಷಕ ವೃತ್ತಿಯಿಂದ ವಜಾಗೊಳಿಸಲು ಸರ್ಕಾರ ಆದೇಶ

ತಿರುವನಂತಪುರಂ: ಕಣ್ಣೂರು ಪಾಲತ್ತಾಯಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೆ. ಪದ್ಮರಾಜನ್ ಅವರನ್ನು ಶಿಕ್ಷಕ ವೃತಿಯಿಂದ ವಜಾಗೊಳಿಸಲು ಸರ್ಕಾರ ಆದೇಶಿಸಿದೆ.

ಬಿಜೆಪಿ ನಾಯಕ ಮತ್ತು ಶಿಕ್ಷಕ ಕೆ. ಪದ್ಮರಾಜನ್ ವಿರುದ್ಧ ತಲಶ್ಯೇರಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಅವರ ನಿರ್ದೇಶನ ನೀಡಿದ್ದಾರೆ.  


ಈ ಕ್ರಮವು ಕೇರಳ ಶಿಕ್ಷಣ ಕಾಯ್ದೆಯ ಅಧ್ಯಾಯ 15ಂ ಮತ್ತು ನಿಯಮ 77ಂ ಅಡಿಯಲ್ಲಿದೆ ಎಂದು ಶಿಕ್ಷಣ ಸಚಿವರು ಫೇಸ್‍ಬುಕ್ ಪೋಸ್ಟ್‍ನಲ್ಲಿ ವಿವರಿಸಿದ್ದಾರೆ.

ಶಾಲಾ ವ್ಯವಸ್ಥಾಪಕರಿಗೆ ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲು ಮತ್ತು ಅವರನ್ನು ಸೇವೆಯಿಂದ ವಜಾಗೊಳಿಸಲು ತುರ್ತು ಸೂಚನೆ ನೀಡುವಂತೆ ಶಿಕ್ಷಣ ಉಪ ನಿರ್ದೇಶಕರಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

ಈ ವಿಷಯದಲ್ಲಿ ವ್ಯವಸ್ಥಾಪಕರು ತೆಗೆದುಕೊಂಡ ಕ್ರಮಗಳನ್ನು ತಕ್ಷಣ ವರದಿ ಮಾಡಬೇಕು ಎಂದು ಸಚಿವರು ತಿಳಿಸಿದರು.

ಕಣ್ಣೂರು ಪಾಲತ್ತಾಯಿ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕ ಕೆ. ಪದ್ಮರಾಜನ್ ಅವರಿಗೆ ತಲಶ್ಶೇರಿ ಫಾಸ್ಟ್ ಟ್ರ್ಯಾಕ್ ಪೆÇೀಕ್ಸೊ ನ್ಯಾಯಾಲಯದ ನ್ಯಾಯಾಧೀಶೆ ಎಂ.ಟಿ. ಜಲಜಾ ರಾಣಿ ಅವರು ಜೀವಾವಧಿ ಶಿಕ್ಷೆ ವಿಧಿಸಿದರು.

ಪ್ರಕರಣದಲ್ಲಿ ಆರೋಪಿ ತಪ್ಪಿತಸ್ಥನೆಂದು ನ್ಯಾಯಾಲಯವು ಘೋಷಿಸಿತ್ತು. ದಂಡ ಪಾವತಿಸದಿದ್ದರೆ, ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬೇಕು.

ಬಿಜೆಪಿ ತ್ರಿಪ್ರಾಂಗಟೂರ್ ಪಂಚಾಯತ್ ಅಧ್ಯಕ್ಷರಾಗಿದ್ದ ಪದ್ಮರಾಜನ್, ನಾಲ್ಕನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಪ್ರಕರಣ ದಾಖಲಾಗಿದೆ. 2020 ರ ಜನವರಿ ಮತ್ತು ಫೆಬ್ರವರಿಯಲ್ಲಿ ಪದ್ಮರಾಜನ್ ಬಾಲಕಿಯನ್ನು ಮೂರು ಬಾರಿ ಶೌಚಾಲಯಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ದೂರು ದಾಖಲಾಗಿತ್ತು.

ಶಾಲೆಯ ಶೌಚಾಲಯದಲ್ಲಿ ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಚೈಲ್ಡ್ ಲೈನ್‍ಗೆ ಮೊದಲು ಮಾಹಿತಿ ಸಿಕ್ಕಿತು. ಮಗುವಿನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪಾನೂರ್ ಪೆÇಲೀಸರು ಮಾರ್ಚ್ 17, 2020 ರಂದು ಪ್ರಕರಣ ದಾಖಲಿಸಿದರು. ಆರೋಪಿಯನ್ನು ಏಪ್ರಿಲ್ 15 ರಂದು ಪೆÇಯಿಲೂರಿನ ವಿಲಕೊಟ್ಟೂರಿನಲ್ಲಿರುವ ತನ್ನ ಅಡಗುತಾಣದಿಂದ ಬಂಧಿಸಲಾಯಿತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries