ತಿರುವನಂತಪುರಂ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೇರಳ ಘಟಕವು ಕೇರಳದಲ್ಲಿ ನಡೆಯುತ್ತಿರುವ ಆಸ್ಪತ್ರೆ ಹಿಂಸಾಚಾರವನ್ನು ಖಂಡಿಸಿದ್ದು, ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.
ಕೇರಳದಲ್ಲಿ ಆಸ್ಪತ್ರೆ ದಾಳಿಗಳು ನಿರಂತರ ಕಥೆಯಾಗಿದೆ. ಇತ್ತೀಚಿನ ಘಟನೆ ನವೆಂಬರ್ 10 ರಂದು ಮಧ್ಯಾಹ್ನ ಪುಲ್ಪಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಡಾ. ಜಿತಿನ್ ರಾಜ್ ಮೇಲೆ ಆಸ್ಪತ್ರೆ ಆವರಣದಲ್ಲಿ ದಾಳಿ ನಡೆಸಲಾಯಿತು. ಓಪಿಯಲ್ಲಿ ಮಹಿಳಾ ವೈದ್ಯರ ಅಸಭ್ಯತೆಯನ್ನು ಪ್ರಶ್ನಿಸಿದ್ದಕ್ಕಾಗಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಡಾ. ಜಿತಿನ್ ಅವರ ಬೆರಳಿನ ಮೂಳೆ ಮುರಿದಿದೆ. ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರು ದಾಳಿಯಿಂದ ಉಂಟಾದ ಎದೆ ನೋವಿನಿಂದಾಗಿ ತೀವ್ರ ನಿಗಾ ಘಟಕದಲ್ಲಿದ್ದಾರೆ.ಸೀಮಿತ ಸಂದರ್ಭಗಳಲ್ಲಿಯೂ ಆರೋಗ್ಯ ಕ್ಷೇತ್ರವನ್ನು ಉತ್ತಮ ಸ್ಥಿತಿಯಲ್ಲಿಡಲು ಹಗಲಿರುಳು ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ದಾಳಿಕೋರರನ್ನು ತಕ್ಷಣ ಬಂಧಿಸಬೇಕು ಎಮನದು ಐಎಂಎ ರಾಜ್ಯ ಅಧ್ಯಕ್ಷ ಡಾ. ಎಂ.ಎನ್. ಮೆನನ್ ಮತ್ತು ಕಾರ್ಯದರ್ಶಿ ಡಾ. ರಾಯ್ ಆರ್. ಚಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.




