HEALTH TIPS

ವಿವಾಹ "ರಜತ ಸಂಭ್ರಮ, ನೃತ್ಯ, ಗಾನ ಸಂಭ್ರಮ ಕಾರ್ಯಕ್ರಮ

ಕಾಸರಗೋಡು: ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ ಮುಂದಾಳು ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ-ರೂಪಕಲಾ ದಂಪತಿ ವಿವಾಹದ 25ನೇ ವರ್ಷಚಾರಣೆ, ವಿವಾಹ ರಜತ ಸಂಭ್ರಮ ವನ್ನು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಆಚರಿಸಲಾಯಿತು. 

ಈ ಸಂದರ್ಭ  ಸುಮಾರು 25 ಮಂದಿ ಮುತ್ತೈದೆಯರಿಗೆ "ಭಾಗಿನ ಸಮರ್ಪಣೆ" ಮಾಡಲಾಯಿತು. ಹೊಳ್ಳ ದಂಪತಿಯನ್ನು ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿ ಗೌರವಿಸಿದರು.  ಈ ಸಂದರ್ಭ ಗುರುರಾಜ್ ಕಾಸರಗೋಡು ಸಾರಥ್ಯದ "ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ತಂಡದ ನೃತ್ಯ ವೈಭವ, ಶ್ರೀ ವಿಷ್ಣು ಪ್ರಿಯ ಮಹಿಳಾ ಸಂಘ, ಕೀಕಾನ ಇವರ ನೃತ್ಯ, ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು. ಕಾಸರಗೋಡು ಜಿಲ್ಲೆಯ ಹಾಗೂ ಕನ್ನಡ ಭವನದ ಕೊಡಗು ಜಿಲ್ಲಾ ಘಟಕ, ದ. ಕ. ಜಿಲ್ಲಾ ಘಟಕ, ಕೋಲಾರ ಜಿಲ್ಲಾ ಘಟಕ,  ಕೇರಳ ರಾಜ್ಯ-ಕನ್ನಡ ಚುಟುಕು ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries