HEALTH TIPS

ಬದಿಯಡ್ಕದಲ್ಲಿ ಏಕತಾ ಓಟ; ವಿದ್ಯಾರ್ಥಿಗಳು, ಪೊಲೀಸರು, ಸಾರ್ವಜನಿಕರ ಸಹಭಾಗಿತ್ವ

ಬದಿಯಡ್ಕ: ಬದಿಯಡ್ಕ ಪೋಲೀಸ್ ಠಾಣೆಯ ನೇತೃತ್ವದಲ್ಲಿ, ಎಸ್‍ಪಿಸಿ, ಜನಮೈತ್ರಿ ಪೋಲೀಸ್, ರೆಡ್ ಕ್ರಾಸ್, ಸ್ಕೌಟ್-ಗೈಡ್ಸ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕ ಮತ್ತು ವಿವಿಧ ಕ್ಲಬ್‍ಗಳು ರಾಷ್ಟ್ರೀಯ ಏಕತಾ ದಿನದ ಅಂಗವಾಗಿ `ರನ್ ಎಗೈನ್ಸ್ಟ್ ಡ್ರಗ್ಸ್ ಸೇ ನೋ ಟು ಡ್ರಗ್ಸ್' ಎಂಬ ಘೋಷಣೆಯಡಿಯಲ್ಲಿ ಗುಂಪು ಓಟ ಆಯೋಜಿಸಲಾಯಿತು. 

ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಧ್ವಜಾರೋಹಣ ನೆರವೇರಿಸಿದ ರ್ಯಾಲಿ ಬದಿಯಡ್ಕದಿಂದ ಪ್ರಾರಂಭವಾಗಿ ಬೋಳುಕಟ್ಟೆ ಮೈದಾನದ ಮೂಲಕ ಪೋಲೀಸ್ ಠಾಣೆಯಲ್ಲಿ ಕೊನೆಗೊಂಡಿತು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್, ಎನ್.ಎಚ್.ಎಸ್.ಎಸ್. ಬದಿಯಡ್ಕ, ಎಸ್.ಡಿ.ಪಿ.ಎ, ಎಚ್.ಎಸ್.ಎಸ್. ಧರ್ಮತಡ್ಕ ಶಾಲೆಗಳ ವಿದ್ಯಾರ್ಥಿಗಳು, ಎಲ್ಲಾ ಪೋಲೀಸ್ ಅಧಿಕಾರಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಬದಿಯಡ್ಕ ಠಾಣಾಧಿಕಾರಿ ಸವ್ಯಸಾಚಿ, ಎ.ಎಸ್.ಐ. ಸುಕುಮಾರನ್ ರ್ಯಾಲಿಯನ್ನು ಸ್ವಾಗತಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries