ಮಂಜೇಶ್ವರ: ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲಾ ಮೈದಾನದಲ್ಲಿ ಮಂಗಳವಾರ ನಡೆದ ಸಿಬಿಎಸ್.ಇ. ಅಂತರ ಶಾಲಾ ಕಾಲ್ಚೆಂಡು ಪಂದ್ಯಾಟದಲ್ಲಿ ಕುನ್ನಿಲ್ ಶಾಲೆ ಮುಟ್ಟಂ ಪ್ರಥಮ ಹಾಗೂ ಎಜೆಐ ಶಾಲೆ ನಯಾ ಬಜಾರ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಫೈನಲ್ ಪಂದ್ಯಾಟದಲ್ಲಿ ಕುನ್ನಿಲ್ ಶಾಲೆ ಮುಟ್ಟಂ ತಂಡದ ವಿದ್ಯಾರ್ಥಿಗಳು ಎಜೆಐ ಶಾಲೆ ನಯಾ ಬಜಾರ್ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯವು ಪೀಸ್ ಕ್ರಿಯೇಟಿವ್ ಶಾಲೆ ಕುಂಜತ್ತೂರು ಹಾಗೂ ಎಜೆಐ ಶಾಲೆ ನಯಾಬಜಾರ್ ತಂಡಗಳ ನಡುವೆ ನಡೆಯಿತು. ಎಜೆಐ ಶಾಲೆ ನಯಾಬಜಾರ್ ತಂಡವು 3-0 ಗೋಲುಗಳ ಅಂತರದಿಂದ ಗೆದ್ದಿತು.
ಪಂದ್ಯಾಟ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಕುನ್ನಿಲ್ ಮುಟ್ಟಂ ಶಾಲಾ ತಂಡದ ಮೊಹಮ್ಮದ್ ಶಾಮಿಲ್, ಬೆಸ್ಟ್ ಡಿಫೆಂಡರ್ ಚಾಂಪಿಯನ್ ಪ್ರಶಸ್ತಿಯನ್ನು ಕುನ್ನಿಲ್ ಮುಟ್ಟಂ ಶಾಲಾ ತಂಡದ ಮೊಹಮ್ಮದ್ ಬಿಲಾಲ್, ಹಾಗೂ ಸ್ಟ್ರೈಕರ್ ಚಾಂಪಿಯನ್ ಪ್ರಶಸ್ತಿಯನ್ನು ಎಜೆಐ ನಯಾ ಬಜಾರ್ ಶಾಲಾ ತಂಡದ ಸೂಫಿ ಜಾಸಿಂ ಪಡೆದುಕೊಂಡರು. ಪಂದ್ಯಾಟ ತೀರ್ಪುಗಾರರಾಗಿ ತೂಮಿನಾಡಿನ ರಿಲ್ವಾನ್ ಅಬ್ದುಲ್ ಲತೀಫ್, ಸಕೀಂ, ಶಾಝಿಲ್ ಹಾಗೂ ರೈಫಾನ್ ಕಾರ್ಯನಿರ್ವಹಿಸಿದರು.




.jpg)
