ಬದಿಯಡ್ಕ: ನೀರ್ಚಾಲು ಕುಂಟಿಕಾನ ಮಾಡತ್ತಡ್ಕ ಶ್ರೀ ದೈವಗಳ ಸೇವಾಸಮಿತಿ ಹಾಗೂ ಹರಿಹರ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ ಡಿ. 16 ಮತ್ತು 17 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಡಿ.16 ರಂದು ಬೆಳಗ್ಗೆ 9ಕ್ಕೆ ಹೊರೆಕಾಣಿಕೆ ಮೆರವಣಿಗೆ ಆರಂಭ, ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಿಂದ ಹೊರಟು 10.30ಕ್ಕೆ ಶ್ರೀ ಹರಿಹರಮಂದಿರದಲ್ಲಿ ಉಗ್ರಾಣ ತುಂಬಿಸುವುದು. ಡಿ.17 ಬುಧವಾರ ಪೂರ್ವಾಹ್ನ 4ಕ್ಕೆ ಶರಣಂ ವಿಳಿ, 5ಕ್ಕೆ ಗಣಪತಿ ಹೋಮ, 6ಕ್ಕೆ ಗೋವಿಂದ ಭಟ್ ಮಿಂಚಿನಡ್ಕ ಇವರಿಂದ ದೀಪಪ್ರಜ್ವಲನೆ, ನಂತರ ಭಜನೆ ಆರಂಭ. ವಿವಿಧ ಭಜನಾ ಸಂಘಗಳಿಂದ ಭಜನೆ. ಮಧ್ಯಾಹ್ನ 12ಕ್ಕೆ ಶರಣಂ ವಿಳಿ, 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ, 1.30ಕ್ಕೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಯಕ್ಷಗಾನ ವೈಭವ, ಸಂಜೆ 6ಕ್ಕೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಪಾಲೆಕೊಂಬು ಮೆರವಣಿಗೆ ಆರಂಭವಾಗಿ ರಾತ್ರಿ ಶ್ರೀ ಹರಿಹರಮಂದಿರದ ಅಂಗಣಕ್ಕೆ ಆಗಮನ. ಕುಣಿತ ಭಜನೆ, ಸಿಂಗಾರಿ ಮೇಳ ಜೊತೆಗೂಡಲಿದೆ. ರಾತ್ರಿ 10ಕ್ಕೆ ಮಹಾಪೂಜೆ, 1ಕ್ಕೆ ಅಯ್ಯಪ್ಪನ್ ಪಾಟ್, ಪೊಲಿಪಾಟ್, ರಾತ್ರಿ 2ಕ್ಕೆ ಪಾಲ್ಕಿಂಡಿ ಸೇವೆ, ಅಗ್ನಿಸೇವೆ, ಪೂರ್ವಾಹ್ನ 3ಕ್ಕೆ ತಿರಿ ಉಯಿಚ್ಚಿಲ್, ಅಯ್ಯಪ್ಪ ವಾವರ ಯುದ್ಧ ವೇಣು ಮಾರಾರ್ ಮತ್ತು ಸಂಘ ಬಾಲುಶ್ಶೇರಿ ಕೋಝಿಕ್ಕೋಡು ಇವರಿಂದ ನಡೆಯಲಿದೆ. ಪೂರ್ವಾಹ್ನ 5ಕ್ಕೆ ಶರಣಂ ವಿಳಿ ನಡೆಯಲಿದೆ.

