HEALTH TIPS

ಬಗೆಹರಿದ ಗೊಂದಲ: ತಿರುವನಂತಪುರಂ ಮೇಯರ್ ಅಭ್ಯರ್ಥಿಯಾಗಿ ವಿ.ವಿ. ರಾಜೇಶ್. ಆಶಾನಾಥ್ ಉಪ ಮೇಯರ್ ಅಭ್ಯರ್ಥಿಯಾಗಿ ಅಧಿಕೃತ ಘೋಷಣೆ

ತಿರುವನಂತಪುರಂ: ವಿವಾದಗಳು ಮತ್ತು ಅನಿಶ್ಚಿತತೆಗಳ ಬಳಿಕ, ವಿ.ವಿ. ರಾಜೇಶ್ ತಿರುವನಂತಪುರಂ ಮೇಯರ್ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಸುರೇಶ್ ಅಧಿಕೃತ ಘೋಷಣೆ ಮಾಡಿದ್ದಾರೆ. 


ಆಶಾನಾಥ್ ಉಪ ಮೇಯರ್ ಅಭ್ಯರ್ಥಿಯಾಗಲಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾದ ಎರಡು ವಾರಗಳ ನಂತರ ಅಧಿಕಾರಕ್ಕೆ ಬರುತ್ತಿರುವ ತಿರುವನಂತಪುರಂ ಕಾರ್ಪೋರೇಷನ್‍ಗೆ ಮೇಯರ್ ನಿರ್ಣಯಿಸಲು ಬಿಜೆಪಿ ಹೆಣಗಾಡಿತ್ತು. 

ಮಾಜಿ ಡಿಜಿಪಿ ಆರ್. ಶ್ರೀಲೇಖಾ ಮತ್ತು ವಿ.ವಿ. ರಾಜೇಶ್ ಅವರ ಹೆಸರುಗಳನ್ನು ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ ಎಂಬ ಸೂಚನೆಗಳು ಮೊದಲೇ ಇದ್ದವು.

ಶ್ರೀಲೇಖಾ ಮೇಯರ್ ಅಭ್ಯರ್ಥಿಯಾಗುವುದಕ್ಕೆ ಬಿಜೆಪಿಯ ಒಂದು ದೊಡ್ಡ ವರ್ಗ ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿತ್ತು.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಮೇಯರ್ ಯಾರೇ ಆಗಿರಲಿ ಅವರನ್ನು ಒಪ್ಪಿಕೊಳ್ಳುವಂತೆ ಎಲ್ಲಾ ಕೌನ್ಸಿಲರ್‍ಗಳಿಗೆ ವೈಯಕ್ತಿಕವಾಗಿ ವಿನಂತಿಸಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries