ತಿರುವನಂತಪುರಂ: ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣವನ್ನು ಎಐಜಿ ಜಿ. ಪೂಂಗುಳಲಿ ತನಿಖೆ ನಡೆಸಲಿದ್ದಾರೆ.
ರಾಹುಲ್ ವಿರುದ್ಧದ ಎರಡನೇ ಪ್ರಕರಣವು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಅವರು ಡಿಜಿಪಿಗೆ ಸಲ್ಲಿಸಿದ ದೂರನ್ನು ಆಧರಿಸಿದೆ. ಪ್ರಕರಣವನ್ನು ಮುಂದುವರಿಸಲು ತಾನು ಸಿದ್ಧ ಎಂದು ಸಂತ್ರಸ್ತೆ ತನಿಖಾ ತಂಡಕ್ಕೆ ತಿಳಿಸಿದ ನಂತರ ಪೂಂಗುಳಲಿಗೆ ತನಿಖಾ ಹೊಣೆಗಾರಿಕೆಯನ್ನು ನೀಡಲು ನಿರ್ಧರಿಸಲಾಯಿತು.
ದೂರುದಾರರು ಕೇರಳದ ಹೊರಗೆ ವಾಸಿಸುವ 23 ವರ್ಷದ ಸ್ತ್ರೀ. ಮದುವೆ ಭರವಸೆ ನೀಡಿ ತನ್ನ ಮೇಲೆ ಕ್ರೂರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸ್ತ್ರೀ ದೂರು ನೀಡಿದ್ದಾಳೆ. ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ದೇಹದಾದ್ಯಂತ ಗಾಯಗಳನ್ನು ಮಾಡಿದ್ದಾನೆ. ಅಲ್ಲದೆ, ತನಗೆ ಕ್ರೂರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲಾಗಿದೆ ಎಂದು ಸ್ತ್ರೀ ತನ್ನ ದೂರಿನಲ್ಲಿ ಹೇಳಿದ್ದಾಳೆ. ರಾಹುಲ್ ಜೊತೆಗಿದ್ದ ಅವರ ಸ್ನೇಹಿತ ಫೆನ್ನಿ ನೈನನ್ ಕೂಡ ಇದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ರಾಹುಲ್ ಇನ್ಸ್ಟಾಗ್ರಾಮ್ ಮೂಲಕ ಸ್ತ್ರೀಯ ಸ್ನೇಹ ಬೆಳೆಸಿಕೊಂಡಿದ್ದಾನೆ. ಇದೇ ವೇಳೆ, ಲೈಂಗಿಕ ದೌರ್ಜನ್ಯ ಮತ್ತು ಭ್ರೂಣ ಹತ್ಯೆ ಪ್ರಕರಣದಲ್ಲಿ ರಾಹುಲ್ ಮಾಂಕೂಟತ್ತಿಲ್ ಅವರ ಜಾಮೀನು ಅರ್ಜಿ ತಿರಸ್ಕøತವಾದ ನಂತರ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ವಿಶೇಷ ತನಿಖಾ ತಂಡವು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಶಾಸಕ ಒಂಬತ್ತನೇ ದಿನವೂ ತಲೆಮರೆಸಿಕೊಂಡಿದ್ದಾನೆ. ಕಾಸರಗೋಡು ಮತ್ತು ವಯನಾಡ್ ಪ್ರದೇಶಗಳಲ್ಲಿ ಮತ್ತು ಕರ್ನಾಟಕ ಸೇರಿದಂತೆ ರಾಜ್ಯದ ಹೊರಗೆ ತನಿಖೆಯನ್ನು ತೀವ್ರಗೊಳಿಸಲಾಗಿದೆ.




