HEALTH TIPS

ಬದಿಯಡ್ಕದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ; ಬಿಜೆಪಿ ವಿಜಯಸಂಕಲ್ಪ ಮೆರವಣಿಗೆ

ಬದಿಯಡ್ಕ: ತ್ರಿಸ್ಥರ ಪಂಚಾಯಿತಿ ಚುನಾವಣೆಯ ಬಹಿರಂಗ ಪ್ರಚಾರ ಮಂಗಳವಾರ ಸಂಜೆ 6 ಗಂಟೆಗೆ ಕೊನೆಗೊಂಡಿತು. ಡಿಸೆಂಬರ್ 11ರಂದು ಗುರುವಾರ ಜನಪ್ರತಿಧಿಗಳ ಆಯ್ಕೆ ಮತದಾರ ಪ್ರಭುವಿನ ಕೈಯಲ್ಲಿ ನಡೆಯಲಿದೆ. ಬದಿಯಡ್ಕ ಗ್ರಾಮಪಂಚಾಯಿತಿಗೆ ವ್ಯಾಪ್ತಿಯಲ್ಲಿ ಒಟ್ಟು 21 ವಾರ್ಡುಗಳಿಗೆ, ಮೂರು ಬ್ಲಾಕ್ ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ನಾಳೆ ಮತದಾನ ನಡೆಯಲಿದೆ.

ಬಿಜೆಪಿ ಶಕ್ತಿಪ್ರದರ್ಶನ :

25 ವರ್ಷಗಳ ಯುಡಿಎಫ್ ಆಡಳಿತಕ್ಕೆ ಕೊನೆಗಾಣಿಸಿ ಬದಿಯಡ್ಕ ಗ್ರಾಮಪಂಚಾಯಿತಿ ಆಡಳಿತವನ್ನು ಮರಳಿ ಪಡೆಯುವ ಲಕ್ಷ್ಯದೊಂದಿಗೆ ಬಿಜೆಪಿ ಅಭ್ಯರ್ಥಿಗಳು, ನಾಯಕರು ಶತಪ್ರಯತ್ನದಲ್ಲಿದ್ದಾರೆ. ಗ್ರಾಮಪಂಚಾಯಿತಿಯ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳು, ಶೌಚಾಲಯ, ಮನೆ ನಿರ್ಮಾಣ, ಕೃಷಿಗೆ ಅನುದಾನ, ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆಯನ್ನು ನೀಡುವುದಾಗಿ ಬಿಜಪಿ ಹೇಳಿದೆ. ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಕಛೇರಿಯಿಂದ ಎಲ್ಲ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಜೊತೆಗೂಡಿ ಪೇಟೆಯಲ್ಲಿ ವಿಜಯಸಂಕಲ್ಪ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಾರ್ಯಕರ್ತರು ಅತ್ಯುತ್ಸಾಹದಿಂದ ಪಾಲ್ಗೊಂಡು ಜಯಘೋಷವನ್ನು ಕೂಗಿದರು. 

ಎಡರಂಗದ ಶಕ್ತಿಪ್ರದರ್ಶನ :

ಬದಿಯಡ್ಕ ಪೇಟೆಯಲ್ಲಿ ಎಡರಂಗದ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ಬದಿಯಡ್ಕ ಬಸ್ಸು ತಂಗುದಾಣದ ಪರಿಸರದಿಂದ ಮೆರವಣಿಗೆಯ ಮೂಲಕ ಪೇಟೆಯಲ್ಲಿ ಹೆಜ್ಜೆ ಹಾಕಿ ತಮ್ಮ ಶಕ್ತಿಪ್ರದರ್ಶನವನ್ನು ತೋರ್ಪಡಿಸಿದರು. ಇದೇ ವೇಳೆ 25 ವರ್ಷಗಳಿಂದ ಬದಿಯಡ್ಕದಲ್ಲಿ ಆಡಳಿತವನ್ನು ನೀಡಿದ ಯುಡಿಎಫ್ ಶಕ್ತಿಪ್ರದರ್ಶನದಲ್ಲಿ ಭಾಗಿಯಾಗಿರಲಿಲ್ಲ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries