ಮಲಪ್ಪುರಂ: ಪೂಕೊಟ್ಟೂರಿನಲ್ಲಿ ಪ್ರಚಾರ ಸಮಾರೋಪದ ವೇಳೆ ಎಲ್ಡಿಎಫ್ ಮತ್ತು ಯುಡಿಎಫ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿರುವುದು ವರದಿಯಾಗಿದೆ. ಮುಸ್ಲಿಂ ಲೀಗ್ನ ಪ್ರಚಾರ ವಾಹನವನ್ನು ಎಲ್ಡಿಎಫ್ ಕಾರ್ಯಕರ್ತರು ತಡೆದಿದ್ದರಿಂದ ಘರ್ಷಣೆ ಸಂಭವಿಸಿದೆ.
ಪೂಕೊಟ್ಟೂರು ಪಂಚಾಯತ್ನ ಎಂಟನೇ ವಾರ್ಡ್ನಲ್ಲಿ ಈ ಘಟನೆ ನಡೆದಿದೆ. ಎರಡು ಗುಂಪುಗಳ ನಡುವೆ ಉದ್ವಿಘ್ನತೆ ಸೃಷ್ಟಿಯಾಗಿ ಭಾರೀ ಸಂಘರ್ಷ ಏರ್ಪಟ್ಟಿತು.
ಸಮಾರೋಪಕ್ಕೆ ಬಂದಿದ್ದ ಪ್ರಚಾರ ವಾಹನವನ್ನು ಎಲ್ಡಿಎಫ್ ಕಾರ್ಯಕರ್ತರು ತಡೆದರು. ಗುರುವಾರ ನಡೆಯಬೇಕಿರುವ ಎರಡನೇ ಹಂತದ ಚುನಾವಣೆಗೆ ನಿನ್ನೆ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು.

