HEALTH TIPS

ಇದು ಕೇವಲ ಹಾಸ್ಯಾಸ್ಪದ; ರಿಸರ್ವ್ ಬ್ಯಾಂಕ್ ವಿರುದ್ಧ ಕಿಫ್ಬಿ ಕಾರ್ಯನಿರ್ವಹಿಸಿಲ್ಲ: ಇಡಿ ನೋಟಿಸ್‍ಗೆ ಮುಖ್ಯಮಂತ್ರಿ ಮೊದಲ ಬಾರಿಗೆ ಪ್ರತಿಕ್ರಿಯೆ

ತ್ರಿಶೂರ್: ಕೆಐಐಎಫ್‍ಬಿ(ಕಿಪ್ಭಿ) ಮಸಾಲಾ ಬಾಂಡ್‍ಗೆ ಸಂಬಂಧಿಸಿದಂತೆ ಇಡಿ ನೋಟಿಸ್‍ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ಹೇಳಬಹುದಾದದ್ದು ಇಷ್ಟೇ ಎಂದು ಮುಖ್ಯಮಂತ್ರಿ ಹೇಳಿದರು.


ನಾವು ಕೆಐಐಎಫ್‍ಬಿಗಾಗಿ ಹಣವನ್ನು ಖರ್ಚು ಮಾಡಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಹಣವನ್ನು ಖರ್ಚು ಮಾಡಲಾಗಿದೆ. ಇದು ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿದೆ. ಕೆಐಐಎಫ್‍ಬಿ ಕಾರ್ಯನಿರ್ವಹಣೆಯಲ್ಲಿ ರಿಸರ್ವ್ ಬ್ಯಾಂಕ್ ನಿಯಮ ವಿರುದ್ಧ ಯಾವುದೇ ವ್ಯತ್ಯಯ ಮಾಡಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಇಡಿ ನೋಟಿಸ್‍ಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲು.

ನಿರ್ದಿಷ್ಟ ಉದ್ದೇಶಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನ ಮತ್ತು ಖರೀದಿ ಎರಡು ಪ್ರತ್ಯೇಕ ವ್ಯವಸ್ಥೆಗಳು. ಕೆಐಐಎಫ್‍ಬಿ ಯೋಜನೆಗಳ ಹಿಂದೆ ಯಾವುದೇ ರಿಯಲ್ ಎಸ್ಟೇಟ್ ಹಿತಾಸಕ್ತಿ ಇಲ್ಲ.

ರಾಜ್ಯದಲ್ಲಿ 4 ದೊಡ್ಡ ಯೋಜನೆಗಳನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು 20,000 ಕೋಟಿ ರೂ. ಅಗತ್ಯವಿದೆ. ಆ ಹಣವನ್ನು ಕೆಐಐಎಫ್‍ಬಿ ಮೂಲಕ ಸಂಗ್ರಹಿಸಲಾಗುವುದು. ಅದನ್ನು ತಡೆಯುವ ಉದ್ದೇಶವಿದ್ದರೆ, ಅದು ಸಾಧ್ಯವಾಗದು ಎಂದು ಮುಖ್ಯಮಂತ್ರಿ ತ್ರಿಶೂರ್‍ನಲ್ಲಿ ಹೇಳಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries