HEALTH TIPS

'ತನ್ನನ್ನು ಚಿನ್ನ ಕಳ್ಳ ಎಂದು ಕರೆಯ ಬಾರದು': ಮನೆಯಲ್ಲಿ ನೆಮ್ಮದಿಯ ನಿದ್ರೆಯೂ ಬರುತ್ತಿಲ್ಲ- ಒತ್ತಾಯಿಸಿದ ಕಡಕಂಪಳ್ಳಿ ಸುರೇಂದ್ರನ್

ತಿರುವನಂತಪುರಂ: ಮಾಜಿ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ತನ್ನ ಮೇಲೆ ಚಿನ್ನ ಕದ್ದ ಆರೋಪ ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದಲ್ಲಿ ನೌಕರರು ಅಥವಾ ರಾಜಕೀಯ ನಾಯಕರನ್ನು ಟೀಕಿಸುವುದನ್ನು ನಾನು ವಿರೋಧಿಸುವುದಿಲ್ಲ ಮತ್ತು ತನ್ನನ್ನು ಚಿನ್ನ ಕಳ್ಳ ಎಂದು ಕರೆಯಬಾರದು ಎಂಬುದು ಕಡಕಂಪಳ್ಳಿಯವರ ವಿನಂತಿಸಿದರು. 

ಅಂತಹ ಆರೋಪಗಳನ್ನು ಕೇಳಿದ ನಂತರ ತನಗೆ ಮನೆಯಲ್ಲಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗುತ್ತಿಲ್ಲ ಎಂದು ಕಡಕಂಪಳ್ಳಿ ಹೇಳಿರುವರು. ಕಡಕಂಪಳ್ಳಿಯವರ ವಿನಂತಿಯನ್ನು ಪರಿಗಣಿಸಬಹುದೇ ಎಂದು ನ್ಯಾಯಾಲಯ ಕೇಳಿದಾಗ, ವಕೀಲರು ವಿ.ಡಿ. ಸತೀಶನ್ ಅವರನ್ನು ಕೇಳಿದ ನಂತರವೇ ಇದನ್ನು ಖಚಿತಪಡಿಸಬಹುದು ಎಂದು ತಿಳಿಸಿದರು.

ಚಿನ್ನ ಕದ್ದ ಪ್ರಕರಣದಲ್ಲಿ ವಿ.ಡಿ. ಸತೀಶನ್ ಮಾಡಿರುವ ಆರೋಪಗಳು ಮಾನಹಾನಿಕರವಾಗಿದ್ದು, ಅವರ ಆರೋಪಗಳನ್ನು ಹಿಂಪಡೆಯಬೇಕು ಮತ್ತು ಹೆಚ್ಚಿನ ಆರೋಪಗಳನ್ನು ಮಾಡಬಾರದು ಎಂಬುದು ಕಡಕಂಪಳ್ಳಿಯವರ ವಿನಂತಿಯಾಗಿತ್ತು. ಇದಕ್ಕೆ ವಿರುದ್ಧವಾಗಿ ವರ್ತಿಸಿದರೆ ಸತೀಶನ್ 10 ಲಕ್ಷ ರೂ. ಪರಿಹಾರವನ್ನು ನೀಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries