HEALTH TIPS

ಮಹಾ ಪರಿನಿರ್ವಾಣ ದಿನ: ಹಲವು ಪೀಳಿಗೆಗಳಿಗೆ ಅಂಬೇಡ್ಕರ್‌ ಪ್ರೇರಣೆ

ನವದೆಹಲಿ: ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಮಾನವನ ಘನತೆಯನ್ನು ಎತ್ತಿಹಿಡಿಯಲು ಹಲವು ಪೀಳಿಗೆಗಳಿಗೆ ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಪ್ರೇರಣೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. 

ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿರುವ ಮೋದಿ, 'ನ್ಯಾಯ, ಸಮಾನತೆ ಮತ್ತು ಸಾಂವಿಧಾನಿಕತೆಯ ಬಗ್ಗೆ ಅಂಬೇಡ್ಕರ್‌ ಅವರು ಹೊಂದಿದ್ದ ಬದ್ಧತೆ ಹಾಗೂ ಅವರ ದಾರ್ಶನಿಕ ನಾಯಕತ್ವವು ನಮ್ಮ ರಾಷ್ಟ್ರೀಯ ಪಯಣಕ್ಕೆ ಮಾರ್ಗದರ್ಶನ ಒದಗಿಸುತ್ತಿರುತ್ತದೆ.

ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಮಾರ್ಗಕ್ಕೆ ಅವರ ಆದರ್ಶಗಳು ಬೆಳಕಾಗಿರಲಿ' ಎಂದು 'ಎಕ್ಸ್‌'ನಲ್ಲಿ ತಿಳಿಸಿದ್ದಾರೆ.

ಅಲ್ಲದೇ, ಸಂಸತ್‌ ಆವರಣದ ಪ್ರೇರಣಾ ಸ್ಥಳದಲ್ಲಿರುವ ಅಂಬೇಡ್ಕರ್‌ ಅವರ ಪ್ರತಿಮೆಗೆ ಉಪ ರಾಷ್ಟ್ರಪತಿ ಸಿ.‍ಪಿ.ರಾಧಾಕೃಷ್ಣನ್‌ ಮತ್ತು ಪ್ರಧಾನಿ ಮೋದಿ ಅವರು ಪುಷ್ಪ ನಮನವನ್ನೂ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries