ಇಂಡಿಗೊ ವಿಮಾನ ಅವ್ಯವಸ್ಥೆ ಕುರಿತ ಪಿಐಎಲ್ ಈಗಾಗಲೇ ಹೈಕೋರ್ಟ್ನಲ್ಲಿ ಬಾಕಿ ಇದೆ. ಅರ್ಜಿದಾರರು ಹೊಸ ಪಿಐಎಲ್ ಸಲ್ಲಿಸುವ ಬದಲು ಆ ವಿಷಯದಲ್ಲಿ ಕಕ್ಷಿದಾರನಾಗಲು ಕೋರಿಕೆ ಸಲ್ಲಿಸಬೇಕಿತ್ತು ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠ ಹೇಳಿದೆ.
ಪ್ರಸ್ತುತ ಪಿಐಎಲ್ನಲ್ಲಿ ಉಲ್ಲೇಖಿಸಿರುವ ಸಮಸ್ಯೆಗಳನ್ನು ಹಿಂದಿನ ಪಿಐಎಲ್ನಲ್ಲಿ ನ್ಯಾಯಾಲಯ ಈಗಾಗಲೇ ಪರಿಶೀಲಿಸುತ್ತಿದೆ ಎಂದು ಹೈಕೋರ್ಟ್ ಗಮನಿಸಿದೆ.

