ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್ಐ)ದ110 ನೇ ಸಂಸ್ಥಾಪನಾ ದಿನವನ್ನು ಜ. 5ರಂದು ಆಚರಿಸಲಾಗುವುದು. ಈ ಸಂದರ್ಭ ಮೂರು ದಿವಸಗಳ ಕಾಲ ತೋಟಗಾರಿಕಾ ಬೆಳೆಗಳ ಬಗ್ಗೆ ವಿಚಾರ ಸಂಕಿರಣ ನಡೆಯುವುದು. ತೋಟದ ಬೆಳೆಗಳ ಕ್ಷೇತ್ರದಲ್ಲಿ ಒಂದು ಶತಮಾನದ ಪ್ರವರ್ತಕ ಸಂಶೋಧನೆ ಮತ್ತು ಅಭಿವೃದ್ಧಿಯ ಒಂದು ದಶಕವನ್ನು ಆಚರಿಸಲಿದೆ. ತೋಟಗಾರಿಕಾ ಬೆಳೆಗಳ ವಲಯದ ಫಲಾನುಭವಿಗಳನ್ನು ಒಟ್ಟುಗೂಡಿಸಲಿರುವುದಾಗಿ ಸಿಪಿಸಿಆರ್ಐ ನಿರ್ದೇಶಕ ಮತ್ತು ವಿಚಾರ ಸಂಕಿರಣದ ಜನರಲ್ ಚೇರ್ಮನ್ ಡಾ. ಬಾಲಚಂದ್ರ ಹೆಬ್ಬಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಡಾ. ಸಿದ್ದು ಪಿ. ಅಲಗೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನವದೆಹಲಿಯ ಐಸಿಎಆರ್ನ ಸಹಾಯಕ ಮಹಾನಿರ್ದೇಶಕ(ಹಣ್ಣು ಮತ್ತು ತೋಟಗಾರಿಕೆ ಬೆಳೆಗಳು) ಡಾ. ವಿ. ಬಿ. ಪಟೇಲ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಎಲ್ಲಾ ಪ್ರಮುಖ ತೋಟಗಾರಿಕೆ ಬೆಳೆ ಸಂಶೋಧನಾ ಸಂಸ್ಥೆಗಳ ನಿರ್ದೇಶಕರು ಮತ್ತು ಮುಖ್ಯಸ್ಥರು ಈ ಸಂದರ್ಭ ಭಾಗವಹಿಸುವರು. ಮುಖ್ಯ ವಿಜ್ಞಾನಿ ಡಾ. ರವಿ ಭಟ್ ಅವರು ಕಾರ್ಯಕ್ರಮದ ಸಾಮಾನ್ಯ ಸಂಚಾಲಕರಾಗಿದ್ದು, ತೋಟಗಾರಿಕೆ ಬೆಳೆ ನಿರ್ವಹಣೆ, ಕೀಟ ನಿಯಂತ್ರಣ ಮತ್ತು ಬೆಳೆ ಸುಧಾರಣೆಯಲ್ಲಿನ ಇತ್ತೀಚಿನ ಪ್ರಗತಿಗಳ ಮೇಲೆ ಕೇಂದ್ರೀಕರಿಸಿದ ವಿಚಾರ ಸಂಕಿರಣದ ತಾಂತ್ರಿಕ ಅಧಿವೇಶನಗಳು
ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ, ತೆಂಗಿನಕಾಯಿ ಆಧಾರಿತ ಕಲ್ಪ ಕುಲ್ಫಿ, ಕಲ್ಪ ವೇಫರ್ ಕೋನ್, ಕಲ್ಪ ವೆಲ್ವೆಟ್ (ಡಾರ್ಕ್ ಚಾಕೊಲೇಟ್) ಮತ್ತು ಕಲ್ಪ ಕ್ಯೂಬಿಟ್ಜ್ (ನಾಟಾ-ಡಿ-ಕೊಕೊ)ಗಳಂತಹ ನವೀನ ತೆಂಗಿನಕಾಯಿ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳನ್ನು ಬಿಡುಗಡೆ ನಡೆಯುವುದು.


