HEALTH TIPS

ಕೇರಳದಲ್ಲಿ, 30 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಶೇ.34 ರಷ್ಟು ಅಧಿಕ ರಕ್ತದೊತ್ತಡ; ಶೇ.24 ರಷ್ಟು ಮಧುಮೇಹ

ತಿರುವನಂತಪುರಂ: ರಾಜ್ಯದಲ್ಲಿ ಯುವಜನರಲ್ಲಿ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಸರ್ಕಾರ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಆದ್ರ್ರಮ್ ಆರೋಗ್ಯ ಜನಪರ ಅಭಿಯಾನದ ಭಾಗವಾಗಿ, ಆರೋಗ್ಯ ಕಾರ್ಯಕರ್ತರು ಎರಡು ಹಂತಗಳಲ್ಲಿ 30 ವರ್ಷಕ್ಕಿಂತ ಮೇಲ್ಪಟ್ಟವರ ಮನೆಗಳಿಗೆ ಹೋಗಿ ಅವರನ್ನು ಪರೀಕ್ಷಿಸಿದ್ದರು. ಅವರಲ್ಲಿ 34% ರಷ್ಟು ಅಧಿಕ ರಕ್ತದೊತ್ತಡ ಮತ್ತು 24% ರಷ್ಟು ಮಧುಮೇಹ ಇರುವುದು ಕಂಡುಬಂದಿದೆ. ಆರೋಗ್ಯ ಇಲಾಖೆ ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. 


ಜೀವನಶೈಲಿಯಲ್ಲಿ ಬದಲಾವಣೆಯ ಅಗತ್ಯವನ್ನು ಇದು ಸೂಚಿಸುತ್ತದೆ ಎಂದು ಆರೋಗ್ಯ ತಜ್ಞರು ಗಮನಸೆಳೆದಿದ್ದಾರೆ. ಸಮಸ್ಯೆಯನ್ನು ಪರಿಹರಿಸಲು, ಯುವಕರು ಮತ್ತು ಮಕ್ಕಳು ಸೇರಿದಂತೆ ಎಲ್ಲರೂ ವ್ಯಾಯಾಮ ಮಾಡುವ ಅಭ್ಯಾಸವನ್ನು ಬೆಳೆಸಲು ಆರೋಗ್ಯ ಇಲಾಖೆ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಈ ಹೊಸ ವರ್ಷದಲ್ಲಿ 10 ಲಕ್ಷ ಜನರನ್ನು ವ್ಯಾಯಾಮ ಮಾಡುವ ಅಭ್ಯಾಸಕ್ಕೆ ತರಲು ಪ್ರಯತ್ನಗಳನ್ನು ಪ್ರಾರಂಭಿಸಲಾಗಿದೆ.

ಇದರ ಭಾಗವಾಗಿ, ಆರೋಗ್ಯ ಇಲಾಖೆಯು 'ಆರೋಗ್ಯ ಆನಂದಂ - ವೈಬ್ 4 ವೆಲ್‍ನೆಸ್' ಹೆಸರಿನಲ್ಲಿ ಆಯೋಜಿಸಿರುವ ಸಾರ್ವಜನಿಕ ಅಭಿಯಾನವನ್ನು ಜನವರಿ 1 ರಂದು ಬೆಳಿಗ್ಗೆ 11.30 ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿರುವರು. ಅಭಿಯಾನದ ಭಾಗವಾಗಿ, ಡಿಸೆಂಬರ್ 26 ರಂದು ಕಾಸರಗೋಡಿನಿಂದ ಪ್ರಾರಂಭವಾಗಿ ವಿವಿಧ ಜಿಲ್ಲೆಗಳ ಮೂಲಕ ಪ್ರಯಾಣಿಸಿ ತಿರುವನಂತಪುರಂ ತಲುಪಿದ ಜಾಗೃತಿ ಜಾಥಾ ಇದರೊಂದಿಗೆ ಮುಕ್ತಾಯಗೊಂಡಿದೆ. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು ನಡೆದಿತ್ತು. 

ಆರೋಗ್ಯ ಇಲಾಖೆಯು ಆದ್ರ್ರಮ್ ಮಿಷನ್ 2ರ ಭಾಗವಾಗಿ 10 ಪ್ರಮುಖ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಪ್ರಮುಖವಾದದ್ದು ಜೀವನಶೈಲಿ ರೋಗ ತಡೆಗಟ್ಟುವಿಕೆ. ಫೆಬ್ರವರಿ 4, 2025 ರಂದು ಪ್ರಾರಂಭವಾದ ಮತ್ತು ಎರಡು ಹಂತಗಳಲ್ಲಿ ಜಾರಿಗೆ ತಂದ 'ಆರೋಗ್ಯ ಆನಂದಂ - ಹೊಡೆದೋಡಿಸೋಣ ಅರ್ಬುದಂ' ಎಂಬ ಬೃಹತ್ ಕ್ಯಾನ್ಸರ್ ತಡೆಗಟ್ಟುವಿಕೆ ಅಭಿಯಾನದಲ್ಲಿ ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ. ಅಭಿಯಾನದ ಮುಂದಿನ ಹಂತವೆಂದರೆ 'ಆರೋಗ್ಯ ಆನಂದಂ - ವೈಬ್ 4 ವೆಲ್‍ನೆಸ್' ಅಭಿಯಾನ, ಇದು ಕ್ಷೇಮಕ್ಕೆ ಮಹತ್ವ ನೀಡುತ್ತದೆ.

ವೈಬ್ 4 ವೆಲ್ನೆಸ್ ಚಟುವಟಿಕೆಗಳು 4 ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತವೆ. ಇವು ಆರೋಗ್ಯಕರ ಆಹಾರ, ಸಾಕಷ್ಟು ವ್ಯಾಯಾಮ, ಸರಿಯಾದ ನಿದ್ರೆ ಮತ್ತು ಆರೋಗ್ಯ ರಕ್ಷಣೆ. ಈ ಅಭಿಯಾನವು 2026 ರ ಹೊಸ ವರ್ಷದ ದಿನದಂದು ಆರೋಗ್ಯಕ್ಕಾಗಿ ಪ್ರತಿಜ್ಞೆ ಮಾಡಲು ಕರೆ ನೀಡಿದೆ.

ಯುವಕರು ಮತ್ತು ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಆರೋಗ್ಯಕರ ಆಹಾರ, ಸಾಕಷ್ಟು ವ್ಯಾಯಾಮ, ಸರಿಯಾದ ನಿದ್ರೆ ಮತ್ತು ಆರೋಗ್ಯ ರಕ್ಷಣೆಯ ಆಧಾರದ ಮೇಲೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಪ್ರೇರೇಪಿಸುವುದು ಮತ್ತು ಈ ಗುರಿಯನ್ನು ಸಾಧಿಸಲು ಅಗತ್ಯವಾದ ವ್ಯವಸ್ಥೆಗಳನ್ನು ರಚಿಸಲು ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು ಇದರ ಉದ್ದೇಶವಾಗಿದೆ.

ಆರೋಗ್ಯಕರ ಅಭ್ಯಾಸಗಳನ್ನು ಉತ್ತೇಜಿಸುವ ವಿವಿಧ ಕಾರ್ಯಕ್ರಮಗಳನ್ನು ಅಭಿಯಾನದ ಉದ್ದಕ್ಕೂ ರಾಜ್ಯದಲ್ಲಿ ಆಯೋಜಿಸಲಾಗುವುದು. ಬೈಸಿಕಲ್ ರ್ಯಾಲಿಗಳು, ಗುಂಪು ಓಟಗಳು, ಗುಂಪು ನಡಿಗೆಗಳು, ಜುಂಬಾ ನೃತ್ಯ, ಸ್ಕೇಟಿಂಗ್, ಕಲರಿಪಯಟ್ಟು, ಪೂರಕಲ್ಲಿ, ಪುಲಿಕಲ್ಲಿ, ಕ್ರೀಡಾ ಪಂದ್ಯಾವಳಿಗಳು, ಆರೋಗ್ಯಕರ ಆಹಾರ ತಯಾರಿಕೆ ತರಬೇತಿ, ಆಹಾರ ಪ್ರದರ್ಶನಗಳು, ವ್ಯಾಯಾಮ ತರಬೇತಿ, ಯೋಗ ತರಬೇತಿ, ಫ್ಲ್ಯಾಶ್ ಮಾಬ್‍ಗಳು ಇತ್ಯಾದಿಗಳನ್ನು ಅಭಿಯಾನದ ಭಾಗವಾಗಿ ಎಲ್ಲಾ ಜಿಲ್ಲೆಗಳಲ್ಲಿ ಆಯೋಜಿಸಲಾಗಿತ್ತು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries