ನವದೆಹಲಿ: ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರ ಪ್ರಯತ್ನಗಳ ಫಲವಾಗಿ, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ (ಎನ್.ಎಫ್.ಡಿ.ಬಿ.) ಪ್ರಾದೇಶಿಕ ಕೇಂದ್ರವನ್ನು ತಿರುವನಂತಪುರಂನಲ್ಲಿ ಸ್ಥಾಪಿಸಲಾಗುತ್ತಿದೆ. ಹೈದರಾಬಾದ್ನಲ್ಲಿ ನಡೆದ ಎನ್.ಎಫ್.ಡಿ.ಬಿ. ಸಭೆಯಲ್ಲಿ ಕೇಂದ್ರ ಸಂಪುಟ ಸಚಿವ ರಾಜೀವ್ ರಂಜನ್ 'ಲಾಲನ್' ಸಿಂಗ್ ಈ ಕುರಿತು ಘೋಷಣೆ ಮಾಡಿದ್ದಾರೆ. ಪ್ರಧಾನ ಮಂತ್ರಿ ತಿರುವನಂತಪುರಂಗೆ ಭೇಟಿ ನೀಡುವ ಮೊದಲು ಕೇಂದ್ರವನ್ನು ಸ್ಥಾಪಿಸಲು ಎಲ್ಲಾ ಪ್ರಾಥಮಿಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಜಾರ್ಜ್ ಕುರಿಯನ್ ಅಧಿಕಾರ ವಹಿಸಿಕೊಂಡಾಗಿನಿಂದ, ಕೇರಳದಲ್ಲಿ ಅವರ ನಿಯಂತ್ರಣದಲ್ಲಿರುವ ಸಚಿವಾಲಯಗಳಿಂದ 1,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಹೆಚ್ಚಿನದನ್ನು ಮೀನುಗಾರಿಕೆ ಕ್ಷೇತ್ರದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಖರ್ಚು ಮಾಡಲಾಗಿದೆ.
ಎನ್.ಎಫ್.ಡಿ.ಬಿ. ಪ್ರಾದೇಶಿಕ ಕೇಂದ್ರದ ಸ್ಥಾಪನೆಯು ಕೇರಳದ ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ಜಾರ್ಜ್ ಕುರಿಯನ್ ಹೇಳಿದರು.
ಮೀನು ಉತ್ಪಾದನೆಯನ್ನು ಹೆಚ್ಚಿಸುವುದು, ಮೂಲಸೌಕರ್ಯವನ್ನು ಸುಧಾರಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಎಲ್ಲಾ ಚಟುವಟಿಕೆಗಳನ್ನು ಈ ಕೇಂದ್ರವು ಸಂಘಟಿಸುತ್ತದೆ. ಸಮುದ್ರ ಮೀನುಗಾರಿಕೆಯ ಜೊತೆಗೆ, ಕೊಳಗಳು, ಸರೋವರಗಳು ಮತ್ತು ಜಲಮೂಲಗಳಲ್ಲಿ ಮೀನು ಸಾಕಣೆಯನ್ನು ಉತ್ತೇಜಿಸಲಾಗುತ್ತಿದೆ. ಇದು ಸಮುದ್ರ, ಒಳನಾಡು ಮತ್ತು ಕರಾವಳಿ ಮೀನು ಸಾಕಣೆ ವಲಯಗಳನ್ನು ಸಂಯೋಜಿಸುವ ಮೂಲಕ ಸಮತೋಲಿತ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.
ಮೀನುಗಾರರಿಗಾಗಿ ಮೀನುಗಾರಿಕೆ ನೆಲೆಗಳು, ಲ್ಯಾಂಡಿಂಗ್ ಕೇಂದ್ರಗಳು, ಶೀತಲೀಕರಣ ಘಟಕಗಳು ಮತ್ತು ಒಣಗಿಸುವ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಪರಿಸರ ಸ್ನೇಹಿ ಮೀನು ಸಾಕಣೆ, ಕಡಲಕಳೆ ಸಾಕಣೆ ಮತ್ತು ಸಮುದ್ರ ಸಂಸ್ಕøತಿಯನ್ನು ಉತ್ತೇಜಿಸಲಾಗುತ್ತಿದೆ. ಮೀನುಗಾರರು ಮತ್ತು ಉದ್ಯಮಿಗಳಿಗೆ ತರಬೇತಿ ಮತ್ತು ತಾಂತ್ರಿಕ ನಾವೀನ್ಯತೆಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ಮೂಲಕ, ಮೀನುಗಾರಿಕೆ ಮತ್ತು ಕರಾವಳಿ ವಲಯದಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸುವ ಗುರಿಯನ್ನು ಬಿಜೆಪಿ ಹೊಂದಿದೆ.

