HEALTH TIPS

ಮಕರ ಬೆಳಕು Àುಹೋತ್ಸವ; ಅರಣ್ಯ ಮಾರ್ಗದ ಮೂಲಕ ಪ್ರಯಾಣದ ಮೇಲಿನ ನಿಯಂತ್ರಣ ಅಲ್ಪ ಸಡಿಲಿಕೆ

ಪತ್ತನಂತಿಟ್ಟ: ಶಬರಿಮಲೆ ಮಂಡಲ ಮಕರ ಬೆಳಕು ಮಹೋತ್ಸವದಲ್ಲಿ ಅಯ್ಯಪ್ಪ ಭಕ್ತರು ಸಾಂಪ್ರದಾಯಿಕ ಅರಣ್ಯ ಮಾರ್ಗವಾಗಿ ಎರುಮೇಲಿ ಮೂಲಕ ಜನವರಿ 13 ರಂದು ಸಂಜೆ 6 ಗಂಟೆಯವರೆಗೆ ಪ್ರಯಾಣಿಸಲಿದ್ದಾರೆ. 


ಅಯ್ಯಪ್ಪ ಭಕ್ತರಿಗೆ ಜನವರಿ 14 ರಂದು ಬೆಳಿಗ್ಗೆ 8 ಗಂಟೆಯವರೆಗೆ ಅಳುತಕಡವು ಮತ್ತು 10 ಗಂಟೆಯವರೆಗೆ ಮುಕ್ಕುಜಿ ಮಾರ್ಗವಾಗಿ ಪ್ರಯಾಣಿಸಲು ಅವಕಾಶವಿದೆ ಎಂದು ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಕರವಿಳಕ್ಕು ಮಹೋತ್ಸವಕ್ಕೆ ದಿನಗಳು ಮಾತ್ರ ಬಾಕಿ ಉಳಿದಿದ್ದು, ಶಬರಿಮಲೆಗೆ ಭಕ್ತರ ಹರಿವು ಮುಂದುವರಿದಿದೆ. ಮಕರ ಬೆಳಕು ಮಹೋತ್ಸವಕ್ಕೆ ಸಂಬಂಧಿಸಿದಂತೆ ಶಬರಿಮಲೆ ದೇವಸ್ಥಾನವನ್ನು ತೆರೆದಾಗಿನಿಂದ ಇಲ್ಲಿಯವರೆಗೆ ಸುಮಾರು 8 ಲಕ್ಷ ಅಯ್ಯಪ್ಪ ಭಕ್ತರು ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ.

ಅಯ್ಯಪ್ಪ ವ್ರತಧಾರಿಗಳಿಗೆ ಶಬರಿಮಲೆಯಲ್ಲಿ ಮಕರ ದೀಪ ಬೆಳಗಿಸಲು ತಿರುವಾಭರಣವನ್ನು ಹೊತ್ತ ತಿರುವಾಭರಣ(ಪವಿತ್ರಾಭರಣ) ಮೆರವಣಿಗೆ ಜನವರಿ 12 ರಂದು ಪಂದಳಂನಿಂದ ಹೊರಡಲಿದ್ದು, ಮಧ್ಯಾಹ್ನ 1 ಗಂಟೆಗೆ ಪಂದಳಂ ವಲಿಯ ಕೊಯಿಲ್ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ವಿಶ್ರಮಿಸಿ ಬಳಿಕ ಮೆರವಣಿಗೆ ಮುಂದುವರಿಯಲಿದೆ. 

ಮೆರವಣಿಗೆಯು ಸಾಂಪ್ರದಾಯಿಕ ತಿರುವಾಭರಣಂ ಪಥದ ಮೂಲಕ ಜನವರಿ 14 ರ ಸಂಜೆಯ ವೇಳೆಗೆ ಸನ್ನಿಧಾನಂ ತಲುಪಲಿದೆ. ಜನವರಿ 14 ರಂದು ಮಕರ ಜ್ಯೋತಿ ಮತ್ತು ಮಕರ ಸಂಕ್ರಮಣ ಪೂಜೆ ನಡೆಯಲಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries