HEALTH TIPS

ಬರಲಿದೆ ಕೆಎಸ್‍ಆರ್‍ಟಿಸಿ ಆಸ್ಪತ್ರೆ ಮತ್ತು ವೈದ್ಯಕೀಯ ಮದ್ದಿನಂಗಡಿ; ಉದ್ಯೋಗಿಗಳಿಗೆ ಭವಿಷ್ಯ ನಿಧಿ

ತಿರುವನಂತಪುರಂ: ಕೆಎಸ್‍ಆರ್‍ಟಿಸಿ ಸಾರ್ವಜನಿಕರಿಗಾಗಿ ಆಸ್ಪತ್ರೆ, ವೈದ್ಯಕೀಯ ಮದ್ದಿನಂಗಡಿ ಮತ್ತು ಪ್ರಯೋಗಾಲಯವನ್ನು ಪ್ರಾರಂಭಿಸಲಿದೆ. ಕೊಟ್ಟಾಯಂನಲ್ಲಿ ಪ್ರಧಾನ ಕಚೇರಿ ಕಟ್ಟಡದ ಪಕ್ಕದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಡಯಾಲಿಸಿಸ್ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು. ಉದ್ಯೋಗಿಗಳಿಗಾಗಿ ಕ್ಲಿನಿಕ್ ಅನ್ನು ಸಾರ್ವಜನಿಕ ಬಳಕೆಗೆ ಸೂಕ್ತವಾದ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. 


ನೆಫ್ರಾಲಜಿಸ್ಟ್ ಸೇರಿದಂತೆ ವಿಶೇಷ ಸೌಲಭ್ಯಗಳು ಇರುತ್ತವೆ. ತಜ್ಞ ವೈದ್ಯರ ಸೇವೆಗಳನ್ನು ಖಾಸಗಿ ಆಸ್ಪತ್ರೆಗಳಿಂದಲೂ ಲಭ್ಯವಾಗುವಂತೆ ಮಾಡಲಾಗುವುದು. ಆಸ್ಪತ್ರೆ ನವೀಕರಣಕ್ಕಾಗಿ ಒಂದು ಕೋಟಿ ರೂಪಾಯಿಗಳನ್ನು ಇಂಡಿಯನ್ ಆಯಿಲ್ ಕಾಪೆರ್Çರೇಷನ್‍ನ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ಪಡೆಯಲಾಗಿದೆ. ತೈಲ ಕಂಪನಿಯು ಐದು ಡಯಾಲಿಸಿಸ್ ಘಟಕಗಳನ್ನು ಸಹ ಒದಗಿಸುತ್ತಿದೆ. ಮತ್ತೊಂದು ಸಂಸ್ಥೆಯಿಂದ ಇನ್ನೂ ಐದು ಡಯಾಲಿಸಿಸ್ ಘಟಕಗಳನ್ನು ಒದಗಿಸಲಾಗುವುದು.

ಕಡಿಮೆ ಬೆಲೆಯಲ್ಲಿ ಕ್ಯಾನ್ಸರ್ ಔಷಧಿಗಳನ್ನು ಒದಗಿಸಲು ವೈದ್ಯಕೀಯ ಅಂಗಡಿಯೂ ಇರುತ್ತದೆ. ಇವು ಕಾರ್ಯಾಚರಣೆಯ ವೆಚ್ಚದಲ್ಲಿ ಕೇವಲ 10 ಪ್ರತಿಶತದಷ್ಟು ಲಾಭದೊಂದಿಗೆ ಕಾರ್ಯನಿರ್ವಹಿಸುತ್ತವೆ. ಲ್ಯಾಬ್ ಸೌಲಭ್ಯವನ್ನು ಸ್ಥಾಪಿಸಲು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ (ಆರ್.ಜಿ.ಸಿ.ಬಿ) ಅನ್ನು ಸಂಪರ್ಕಿಸಲಾಗಿದೆ.

ಪರೀಕ್ಷೆಗಳನ್ನು ಉಚಿತವಾಗಿ ನಡೆಸಬಹುದು. ಹೆಚ್ಚಿನ ಸ್ಥಳಾವಕಾಶ ನೀಡಿದರೆ ಸ್ಕ್ಯಾನಿಂಗ್ ಕೇಂದ್ರಕ್ಕೂ ಅವಕಾಶ ನೀಡಬಹುದು ಎಂದು ಆರ್‍ಜಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಚರ್ಚೆಗಳು ಪ್ರಗತಿಯಲ್ಲಿವೆ ಎಂದು ಸಚಿವ ಕೆ.ಬಿ. ಗಣೇಶ್‍ಕುಮಾರ್ ಮಾಹಿತಿ ನೀಡಿದ್ದಾರೆ. ಕಿಜಕ್ಕೆಕೋಟದಲ್ಲಿರುವ ಶೌಚಾಲಯ ನವೀಕರಣಕ್ಕಾಗಿ ಬಿಪಿಸಿಎಲ್ 50 ಲಕ್ಷ ರೂ.ಗಳನ್ನು ನಿಗದಿಪಡಿಸಿದೆ.

ನೌಕರರಿಗೆ ಭವಿಷ್ಯ ನಿಧಿ

ನೌಕರರಿಗೆ ತುರ್ತು ವೈದ್ಯಕೀಯ ನೆರವು ನೀಡಲು ವಿಶೇಷ ಖಾತೆಯನ್ನು ತೆರೆಯಲು ಸಹ ಕ್ರಮಗಳು ನಡೆಯುತ್ತಿವೆ. ಪ್ರತಿ ತಿಂಗಳು ನೌಕರರಿಂದ 50 ರೂ.ಗಳನ್ನು ಸಂಗ್ರಹಿಸಲಾಗುವುದು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries