ಬೆಳಗಿನ ಜಾವ ಮನೆಯಲ್ಲಿ ಕುಸಿದುಬಿದ್ದ ಶ್ರೀನಿವಾಸನ್ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಾಯಿತು. ಆದರೂ ಅವರು ಬದುಕುಳಿಯಲಿಲ್ಲ ಎಂದು ಮೂಲಗಳು ತಿಳಿಸಿವೆ.
ಪಿ.ಟಿ. ಉಷಾ ಅವರಿಗೆ ಕರೆ ಮಾಡಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂತಾಪ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನಿವೃತ್ತ ನೌಕರರಾದ ಶ್ರೀನಿವಾಸನ್ ಅವರು, ಉಷಾ ಅವರ ಪ್ರಸಿದ್ಧ ಕ್ರೀಡಾ ಮತ್ತು ರಾಜಕೀಯ ಜೀವನದುದ್ದಕ್ಕೂ ಜೊತೆಗಿದ್ದರು ಎಂದು ವರದಿ ತಿಳಿಸಿದೆ.
ಶ್ರೀನಿವಾಸನ್ ಅವರನ್ನು ಉಷಾ ಅವರ ವೃತ್ತಿಪರ ಮೈಲಿಗಲ್ಲುಗಳ ಹಿಂದಿನ ಪ್ರೇರಕ ಶಕ್ತಿ ಮತ್ತು ಆಧಾರ ಸ್ತಂಭ ಎಂದು ಪರಿಗಣಿಸಲಾಗಿತ್ತು.
ದಂಪತಿಗೆ ಉಜ್ವಲ್ ಎಂಬ ಮಗನಿದ್ದಾನೆ.

