HEALTH TIPS

ಮಾಘ ಮಹೋತ್ಸವಕ್ಕೆ ಕೇರಳದ ರಾಜಕೀಯ, ಸಾಂಸ್ಕøತಿಕ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಟೆಂಡಿಂಗ್ ಅಭಿಯಾನವಾಗಿಸಲು ಸಂಘ ಪರಿವಾರ ಕರೆ

ಮಲಪ್ಪುರಂ: ಕೇರಳದ ಕುಂಭಮೇಳ ಎಂದೇ ಕರೆಯಲ್ಪಡುವ “ಮಹಾಮಾಘ ಮಹೋತ್ಸವ ಜನವರಿ 18 ರಿಂದ ಆರಂಭಗೊಂಡಿದ್ದು, ಫೆಬ್ರವರಿ 3 ರವರೆಗೆ ಲೋಧಾ ಕರಾವಳಿಯ ತಿರುನವಾಯದಲ್ಲಿ ನಡೆಸಲಾಗುತ್ತಿದೆ. ಕೇರಳದ ಈ ಪರಿಸ್ಥಿತಿ ಬದಲಾಗಬೇಕು ಎಂಬ ನಿರ್ಧಾರದ ಆಧಾರದ ಮೇಲೆ, ಆರ್‍ಎಸ್‍ಎಸ್ ಸಾಮಾಜಿಕ ಮಾಧ್ಯಮದ ಮೂಲಕ ಅಭಿಯಾನಕ್ಕೆ ಸಿದ್ಧತೆ ವ್ಯಾಪಕವಾಗಿ ಸಾಗಿದೆ. ಇಂದು (ಶನಿವಾರ) ಮಾಘ ಮಹೋತ್ಸವವನ್ನು ಸಾಮಾಜಿಕ ಮಾಧ್ಯಮ ಟ್ರೆಂಡಿಂಗ್ ಅಭಿಯಾನವನ್ನಾಗಿ ಪರಿವರ್ತಿಸಲು ಸಂಘ ಪರಿವಾರ ಉತ್ಸುಕವಾಗಿದೆ. ಈ ಮೂಲಕ ಹಿಂದೂ ಚಳುವಳಿಯನ್ನು ಧ್ವನಿಸಬೇಕೆಂದು ಸಂಘ ಪರಿವಾರ ಕರೆ ನೀಡಿದೆ. 


ಮಹಾಮಾಘ ಕುಂಭಮೇಳದ ಕುರಿತು ಸುದ್ದಿ, ವಿವರಗಳು ಮತ್ತು ಅನುಭವಗಳನ್ನು #MaghKumbhKerala ಎಂಬ ಹ್ಯಾಶ್‍ಟ್ಯಾಗ್ ಅಡಿಯಲ್ಲಿ ಸಾಧ್ಯವಾದಷ್ಟು ಬರವಣಿಗೆ, ಪೋಟೋಗಳು ಮತ್ತು ವೀಡಿಯೊಗಳಲ್ಲಿ ಹಂಚಿಕೊಳ್ಳಲು ಸಂಘ ಪರಿವಾರವು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚನೆ ನೀಡಿದೆ.

ಸಂಘ ಪರಿವಾರವನ್ನು ಮುನ್ನಡೆಸುವ ಆರ್‍ಎಸ್‍ಎಸ್, ಮುಂಬರುವ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಮಹಾಮಾಘಂ ಅತ್ಯಂತ ಪ್ರಮುಖ ಹಿಂದೂ ಆಧ್ಯಾತ್ಮಿಕ ಸಭೆಯಾಗಬೇಕೆಂದು ಬಯಸುತ್ತದೆ.ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಸಮಯ, ಎಕ್ಸ್, ಮಧ್ಯಾಹ್ನ 12 ರಿಂದ ಬೆಳಗಿನ ಜಾವ 1 ರವರೆಗೆ ಎಂದು ಸಂಘ ಪರಿವಾರವು ತನ್ನ ಸೂಚನೆಗಳಲ್ಲಿ ಉಲ್ಲೇಖಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries