HEALTH TIPS

ಅರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ಪೋಲೀಸರ ದೌರ್ಜನ್ಯ; ಒಂದು ವಾರದೊಳಗೆ ವರದಿ ಸಲ್ಲಿಸಲು ಮಾನವ ಹಕ್ಕುಗಳ ಆಯೋಗ ಆದೇಶ

ಕುಂಬಳೆ: ಅರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ವಾಹನಗಳನ್ನು ನಿಯಂತ್ರಿಸಲು ಬಳಸಲಾಗುತ್ತಿದ್ದ ಬೂಮ್ ತಡೆಗೋಡೆ ವಾಹನಕ್ಕೆ ಬಿದ್ದು ಕಾರು ಹಾನಿಗೊಳಗಾದ ಬಳಿಕ ಪ್ರಶ್ನಿಸಿದ ಕುಟುಂಬವೊಂದರ ಮೇಲೆ ಕುಂಬಳೆ ಪೋಲೀಸರು ದೌರ್ಜನ್ಯ ಎಸಗಿ ಅವರ ಕಾರನ್ನು ಅಸಮರ್ಪಕವಾಗಿ ನಡೆಸಿರುವ ದೂರು ಇದೆ. ಘಟನೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆಯೇ ಎಂಬ ಬಗ್ಗೆ ತನಿಖೆಗೆ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ. ಕಾಸರಗೋಡು ಜಿಲ್ಲಾ ಪೋಲೀಸ್ ಮುಖ್ಯಸ್ಥರು ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಆಯೋಗದ ನ್ಯಾಯಾಂಗ ಸದಸ್ಯ ಕೆ. ಬೈಜುನಾಥ್ ನಿರ್ದೇಶಿಸಿದ್ದಾರೆ. 


ಈ ಘಟನೆ ಬುಧವಾರ ನಡೆದಿತ್ತು. ಆಸ್ಪತ್ರೆಯ ಉದ್ಯೋಗಿ ಮುಹಮ್ಮದ್ ರಿಯಾಸ್ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬೂಮ್ ತಡೆಗೋಡೆ ಬಿದ್ದಿದೆ. ಆನ್‍ಲೈನ್‍ನಲ್ಲಿ ಟೋಲ್ ಪಾವತಿಸಿದ ನಂತರ ವಾಹನ ಮುಂದೆ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದನ್ನು ಪ್ರಶ್ನಿಸಿದ ರಿಯಾಸ್ ಮತ್ತು ಟೋಲ್ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಸ್ಥಳಕ್ಕೆ ಆಗಮಿಸಿದ ಕುಂಬಳೆ ಪೋಲೀಸರು ರಿಯಾಸ್ ಅವರನ್ನು ಕಾರಿನಿಂದ ಹೊರತೆಗೆದು ವಶಕ್ಕೆ ಪಡೆದರು.

ರಿಯಾಜ್ ಜೊತೆ ವಾಹನದಲ್ಲಿ ವೃದ್ಧ ಮಹಿಳೆ ಮತ್ತು ಆರು ತಿಂಗಳ ಮಗು ಮಾತ್ರವಿತ್ತು. ಪೋಲೀಸರು ಅವರನ್ನು ಎರಡು ಗಂಟೆಗಳ ಕಾಲ ಕಾರಿನಲ್ಲಿ ಕೂರಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಾಧ್ಯಮ ವರದಿಗಳ ಆಧಾರದ ಮೇಲೆ ಮಾನವ ಹಕ್ಕುಗಳ ಕಾರ್ಯಕರ್ತ ಅಡ್ವ. ವಿ. ದೇವದಾಸ್ ಸಲ್ಲಿಸಿದ ದೂರಿನ ಮೇರೆಗೆ ಆಯೋಗವು ಕ್ರಮ ಕೈಗೊಂಡಿದೆ. ಅರಿಕ್ಕಾಡಿ ಟೋಲ್ ಸಂಗ್ರಹದ ವಿರುದ್ಧ ಸ್ಥಳೀಯರು ಈಗಾಗಲೇ ತೀವ್ರ ಪ್ರತಿಭಟನೆಯಲ್ಲಿದ್ದಾರೆ.

ಫೆಬ್ರವರಿ 11 ರಂದು ಕಾಸರಗೋಡು ಕಲೆಕ್ಟರೇಟ್ ಸಭಾಂಗಣದಲ್ಲಿ ನಡೆಯಲಿರುವ ಆಯೋಗದ ಸಭೆಯಲ್ಲಿ ಈ ಪ್ರಕರಣವನ್ನು ಪರಿಗಣಿಸಲಾಗುವುದು. ಕುಟುಂಬದ ವಿರುದ್ಧ ಪೆÇಲೀಸ್ ದೌರ್ಜನ್ಯದ ವಿರುದ್ಧ ಸ್ಥಳೀಯವಾಗಿ ಭಾರಿ ಪ್ರತಿಭಟನೆ ನಡೆದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries