ಪೆರ್ಲ: ಎಣ್ಮಕಜೆ ಗ್ರಾಪಂ, ಕುಟುಂಬಶ್ರೀ ಜಿಲ್ಲಾ ಮಿಷನ್ ಕಾಸರಗೋಡು, ಎಣ್ಮಕಜೆ ಸಿಡಿಎಸ್, ಪಶುಸಂಗೋಪನಾ ಇಲಾಖೆ ಮತ್ತು ಪೆರ್ಲ ಪಶು ವೈದ್ಯಾಲಯದ ನೇತೃತ್ವದಲ್ಲಿ ರೈತರಿಗೆ ಪಶುಸಂಗೋಪನಾ ಕ್ಷೇತ್ರದಲ್ಲಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ "ಜೀವನ" ಅಭಿಯಾನದ ಭಾಗವಾಗಿ ಸ್ವರ್ಗದ ಪಶು ವೈದ್ಯಾಲಯ ಉಪಕೇಂದ್ರದಲ್ಲಿ ಶನಿವಾರ ಸಾಕು ನಾಯಿಗಳಿಗೆ ರೇಬೀಸ್ ಲಸಿಕೆ ಹಾಗೂ ಜಾನುವಾರುಗಳಿಗೆ ಜಂತುಹುಳು ನಿವಾರಣಾ ಔಷಧಿ ವಿತರಿಸಲಾಯಿತು. ಪಶು ವೈದ್ಯಾಧಿಕಾರಿ ಡಾ.ಘನಶ್ಯಾಮ್ ಜೋಶಿ, ವಾರ್ಡ್ ಸದಸ್ಯ ರಾಮಚಂದ್ರ ಎಂ., ಎ.ಎಚ್.ಮಾಸ್ಟರ್ ಸಿಆರ್ ಪಿ ಶಶಿಕಲಾ ಕೆ., ಎ.ಎಚ್.ಸಿ.ಆರ್.ಪಿ.ಗಳಾದ ಜಯಾವತಿ ಎಂ., ಜಯಂತಿ, ಸಿಬ್ಬಂದಿಗಳಾದ ಜ್ಯೋತಿ, ರೇವತಿ ಸಹಕರಿಸಿದರು.


