ನವದೆಹಲಿ: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ನಲ್ಲಿ ಇರಾನ್ ನ ಚಬಹಾರ್ ಬಂದರು ಅಭಿವೃದ್ಧಿಗೆ ಯಾವುದೇ ಹಣ ಮೀಸಲಿಡದಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಅಮೆರಿಕದ ಒತ್ತಡಕ್ಕೆ ಶರಣಾಗತಿಯ ಸಂಕೇತ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ ಹೇಳಿದ್ದಾರೆ.
ಇರಾನ್ನ ಮೇಲೆ ಕಠಿಣ ಅಮೆರಿಕ ನಿರ್ಬಂಧಗಳು ಮತ್ತು ಇರಾನ್ ಜೊತೆಗೆ ವ್ಯವಹಾರವನ್ನು ಮುಂದುವರೆಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕಗಳ ಒತ್ತಡದಿಂದಾಗಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಚಬಹಾರ್ ಬಂದರು ಅಭಿವೃದ್ಧಿಗೆ ಯಾವುದೇ ಹಣ ಮೀಸಲಿಟ್ಟಿಲ್ಲ ಎಂದಿದ್ದಾರೆ.
ಈ ಹಿಂದೆ ಮಧ್ಯ ಏಷ್ಯಾದ ಕಾರ್ಯತಂತ್ರದ ಹೆಬ್ಬಾಗಿಲು ಮತ್ತು ಚೀನಾದ ಗ್ವಾದರ್ ಬಂದರಿಗೆ ಪ್ರತಿತಂತ್ರ ಎಂದು ಭಾರತವೇ ಹೇಳುತ್ತಿದ್ದ ಚಬಹಾರ್ ಬಂದರಿಗೆ ಕಳೆದ ವರ್ಷ ಪರಿಷ್ಕೃತ ಬಜೆಟ್ ನಲ್ಲಿ 400 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು.
ಚಬಹಾರ್ ಬಂದರು ಅಭಿವೃದ್ಧಿ ಸಂಬಂಧ ಅಮೆರಿಕದೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಮೌನವು ಎಲ್ಲವನ್ನೂ ಹೇಳುತ್ತಿದೆ ಎಂದು ವಿಪಕ್ಷ ನಾಯಕರು ಹೇಳುತ್ತಿದ್ದಾರೆ.
ಜಾಗತಿಕ ಇಂಧನ ರಾಜಕೀಯ, ನಿರ್ಬಂಧಗಳು ಮತ್ತು ಆರ್ಥಿಕ ನಿರ್ಧಾರಗಳನ್ನು ಮರುರೂಪಿಸುವುದರಿಂದ, ಭಾರತ ಕೇವಲ ಯುದ್ಧತಂತ್ರದಿಂದ ಈ ರೀತಿ ಮಾಡುತ್ತಿದ್ದಂತೆಯೇ ಅಥವಾ ಪ್ರಮುಖ ಕಾರ್ಯತಂತ್ರದ ಬದ್ಧತೆಯಿಂದ ಹಿಂದೆ ಸರಿಯುತ್ತಿದೆಯೇ ಎಂಬ ಪ್ರಶ್ನೆಗಳು ಹೇಳುವಂತೆ ಮಾಡಿದೆ.

