ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು ತಾಲೂಕು, ಬದಿಯಡ್ಕ ವಲಯದ ಬದಿಯಡ್ಕ ಕಾರ್ಯಕ್ಷೇತ್ರದ ಶ್ರೀ ವಿಘ್ನೇಶ್ವರ ತಂಡದ ಸದಸ್ಯ ಗಿರೀಶ್ ಎಂಬವರು ಪಾಶ್ರ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು, ಇವರಿಗೆ ಚಿಕಿತ್ಸಾ ಸಹಾಯವಾಗಿ ಶ್ರೀಕ್ಷೇತ್ರ ಕ್ರಿಟಿಕಲ್ ಇಲ್ನೆಸ್ ಫಂಡ್ ಗೆ ಮನವಿ ನೀಡಿದ್ದು, ಕ್ಷೇತ್ರದಿಂದ ರೂ. 20000 ಮೊತ್ತವನ್ನು ಪೂಜ್ಯರು ಮಂಜೂರು ಮಾಡಿರುವರು. ಇದರ ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ದಿನೇಶ್ ಅವರು ಫಲಾನುಭವಿ ಗಿರೀಶ್ ಅವರಿಗೆ ಹಸ್ತಾಂತರಿಸಿದರು. ಆ ಸಂದರ್ಭದಲ್ಲಿ ಬದಿಯಡ್ಕ ಜನಜಾಗೃತಿ ಸದಸ್ಯರಾದ ಸುಧಾಕರ್, ವಲಯದ ಮೇಲ್ವಿಚಾರಕಿ ಸುಗುಣ ಎನ್ ಹವಲ್ದಾರ್, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ, ಸೇವಾ ಪ್ರತಿನಿಧಿ ಪ್ರಫುಲ್ಲ ಉಪಸ್ಥಿತರಿದ್ದರು.

.jpg)
