ಕಾಸರಗೋಡು: ಪರಿಸರ ಸಂರಕ್ಷಣೆಯಲ್ಲಿ ಕಾಲಕ್ಕೆ ಹೊಂದಿಕೊಂಡು ಹೊಸ ಆವಿಷ್ಕಾರ ಕಂಡುಕೊಳ್ಳಬೇಕು ಎಂದು ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಹೇಳಿದರು.
ಪರಿಸರ ಸಂರಕ್ಷಣೆ ಬಗ್ಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೆ.ಕೆ. ಸೋಯಾ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಪಿ. ಅಖಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ರಫಿ, ಕೆ.ಸುಜಾತಾ, ಸಿ.ಎಂ.ಮೀನಾ ಕುಮಾರಿ, ಸಿ.ಬಾಲನ್, ಬಿಂದು ಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.
'ಜಿಲ್ಲೆಯ ಪರಿಸರ'ಹತ್ತು ವರ್ಷಗಳ ಪುನಃಸ್ಥಾಪನೆ ಚಟುವಟಿಕೆಗಳು' ಮತ್ತು 'ಪರಿಸರ ಪುನಃಸ್ಥಾಪನೆ ಮತ್ತು ಭವಿಷ್ಯದ ದೃಷ್ಟಿಕೋನಗಳು' ವಿಷಯಗಳ ಕುರಿತು ಹಸಿರು ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್ ರಾಜ್ಯ ಕಾರ್ಯಕ್ರಮ ಅಧಿಕಾರಿ ಜಿ ಕೃಷ್ಣಕುಮಾರ್ ವಿಚಾರ ಸಂಕಿರಣ ಮೋಡರೇಟರ್ ಆಗಿ ಸಹಕರಿಸಿದರು.
ಹಸಿರು ಕ್ರಿಯಾಸೇನೆ, ಯುಪಿ ಮತ್ತು ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಗಳ ವಿಜೇತರು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಮತ್ತು ಕಾಲೇಜು ಮಟ್ಟದ ಪ್ರಬಂಧ ವಿಜೇತರನ್ನು ಸನ್ಮಾನಿಸಲಾಯಿತು. ಜನರ ಮೂಲಕ ನೆಟ್ಝೀರೋ ಕಾರ್ಬನ್ ಕೇರಳ ಅಭಿಯಾನದ ಅಂಗವಾಗಿ ಕಾರ್ಬನ್ ನೆಗೆಟಿವ್ ಸ್ಥಾನಮಾನ ಪಡೆದ ಜಿಲ್ಲೆಯ 15 ಸಂಸ್ಥೆಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅವರು ಪ್ರಮಾಣಪತ್ರಗಳನ್ನು ವಿತರಿಸಿದರು.

