ಕಟಕ್: ಎಸ್ಸಿಬಿ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಒಡಿಶಾದ ಆರೋಗ್ಯ ಸಚಿವ ಮುಕೇಶ್ ಮಹಾಲಿಂಗ್ ಅವರು ಅವಘಡದಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.
ಬೆಂಕಿ ದುರಂತ ಸಂಭವಿಸಿದ ನಂತರ ತೀವ್ರ ನಿಗಾ ಘಟಕದಲ್ಲಿ ಇದ್ದ ರೋಗಿಗಳನ್ನು ಬೇರೆ ವಾರ್ಡ್ಗೆ ಸಿಬ್ಬಂದಿ ಕ್ಷಿಪ್ರವಾಗಿ ಸ್ಥಳಾಂತರ ಮಾಡಿದರು.
ಗಂಭೀರ ಸ್ವರೂಪದ ಸುಟ್ಟಗಾಯಗಳಾಗಿದ್ದ ಏಳು ಮಂದಿ ಮೃತಪಟ್ಟರು. ಇನ್ನಿತರ ಐದು ಮಂದಿ ಚಿಕಿತ್ಸೆ ಪಡೆದ ನಂತರವೂ ಚೇತರಿಸಿಕೊಳ್ಳದೆ ಅಸುನೀಗಿದರು. ಬೆಂಕಿಯ ಕೆನ್ನಾಲಗೆ ವ್ಯಾಪಿಸುವ ಮೊದಲೇ 23 ರೋಗಿಗಳನ್ನು ಸುರಕ್ಷಿತ ವಾರ್ಡ್ಗೆ ಸ್ಥಳಾಂತರಿಸಲಾಯಿತು ಎಂದು ಮುಕೇಶ್ ಮಾಹಿತಿ ನೀಡಿದರು.

