ಕಾಸರಗೋಡು: ಕಾಸರಗೋಡು ನಗರಸಭೆ ಕೇರಳ ಘನತ್ಯಾಜ್ಯ ನಿರ್ವಹಣಾ ಯೋಜನೆ ಶುಚಿತ್ವ ಮಿಷನ್ ಸಮುದಾಯ ಚಿತ್ರಕಲೆ, ಸ್ವಚ್ಛತಾ ರ್ಯಾಲಿ ಮತ್ತು ನವ ಕೇರಳವನ್ನು ತ್ಯಾಜ್ಯ ಮುಕ್ತಗೊಳಿಸುವ ಪ್ರತಿಜ್ಞೆಯನ್ನು ಆಯೋಜಿಸಿತು.
ಹಸಿರು ಚುನಾವಣಾ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಮತ್ತು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಬಣ್ಣ ಬಳಿದು ಉದ್ಘಾಟಿಸಿದರು. ಕಾಸರಗೋಡಿನ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಚಿತ್ರ ಕಲಾವಿದರಾದ ನ್ಯಾಷನಲ್ ಅಬ್ದುಲ್ಲಾ, ಕಮಲಾಕ್ಷನ್, ಕಾಸರಗೋಡು ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು ಮತ್ತು ಹಸಿರು ಕ್ರಿಯಾಸೇನೆ ಕಾರ್ಯಕರ್ತರು ಚಿತ್ರಗಳನ್ನು ಬಿಡಿಸಿದರು. ಕಾಸರಗೋಡು ನಗರಸಭೆ ಕಾರ್ಯದರ್ಶಿ ಜಿ.ಎಸ್. ಆಶಿಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕ ಜಯನ್ ಸ್ವೀಪ್ ನೋಡಲ್ ಅಧಿಕಾರಿ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ರತೀಶ್ ಪಿಲಿಕೋಡ್ ಮತ್ತು ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್ ಮಾತನಾಡಿದರು. ಉಪ ಜಿಲ್ಲಾ ಸಂಯೋಜಕ ಮಿಥುನ್ ಕೃಷ್ಣನ್ ಸ್ವಾಗತಿಸಿದರು ಮತ್ತು ಡಾ. ಸೂರಜ್ ವಂದಿಸಿದರು.



