ಬದಿಯಡ್ಕ: ಹಿರಿಯ ಸಹಕಾರಿ ಪುದುಕೋಳಿ ಶ್ರೀಸುಬ್ರಹ್ಮಣ್ಯ ಭಟ್ ಅವರ ಸಹಸ್ರಚಂದ್ರ ದರ್ಶನ ಶಾಂತಿ ವಿವಿಧ ಕಾರ್ಯಕ್ರಮಗಳೊಂದಿಗೆ ನಾಳೆ (ಮಾ.11) ಪುದುಕೋಳಿಯಲ್ಲಿ ನಡೆಯಲಿದೆ.
ಬೆಳಗ್ಗೆ 6 ರಿಂದ ಶ್ರೀಮಹಾಗಣಪತಿ ಹವನ, ಮಾರ್ಕಾಂಡೇಯ ಹವನ, ಪೂರ್ಣ ಗ್ರಹಶಾಂತಿ, ಮಹಾ ಮೃತ್ಯುಂಜಯ ಹವನ, ಶಿವಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು, 10. ರಿಂದ ಶಾಂತ ಕುಂಟಿನಿ ಸಾರಥ್ಯದಲ್ಲಿ ಸತ್ಯಶಾಂತ ಪ್ರತಿಷ್ಠಾನ ಅರ್ಪಿಸುವ ಗಾನನೃತ್ಯ ವೈಭವ, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ, ಭೋಜನ ಪ್ರಸಾದ, ಅಪರಾಹ್ನ 2. ರಿಂದ
ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ಸಂಜೆ 4.ಕ್ಕೆ ಎಡನೀರು ಮಠಾಧೀಶ ಶ್ರೀ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳು ಹಾಗೂ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಗಳ ಆಗಮನ, ಸಭಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಂಜೆ 6:30 ರಿಂದ ಹನುಮಗಿರಿ ಮೇಳದವರಿಂದ ಶ್ರೀರಾಮ ಚರಿತಾಮೃತಂ ಯಕ್ಷಗಾನ ಬಯಲಾಟ ನಡೆಯಲಿದೆ.



