ಕಾಸರಗೋಡು: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ವರ ಜನ್ಮಶತಮಾನೋತ್ಸವ ಅಂಗವಾಗಿ ದೇಶವ್ಯಾಪಿ ಪರ್ಯಟನೆ ನಡೆಸುತ್ತಿರುವ ಶ್ರೀ ಸತ್ಯಸಾಯೀ ಪ್ರೇಮ ಪ್ರವಾಹಿನಿ ರಥಯಾತ್ರೆ ಮಾ. 10ರಂದು ಕಾಸರಗೋಡು ಜಿಲ್ಲೆಗೆ ಪ್ರವೇಶಿಸಲಿದೆ.
ಕಾಸರಗೋಡು ಶ್ರೀ ಸತ್ಯಸಾಯೀ ಸೇವಾ ಸಂಸ್ಥೆ, ಶ್ರೀ ಸತ್ಯಸಾಯೀ ಸೇವಾ ಸಮಿತಿ ಮತ್ತು ಕಾಸರಗೋಡು ಭಗವಾನ್ ಶ್ರೀ ಸತ್ಯಸಾಯೀ ಅಭಯನಿಕೇತನ ಪದಾಧಿಕಾರಿಗಳು ಜಿಲ್ಲೆಯಲ್ಲಿತ್ವ ನೀಡಲಿದ್ದಾರೆ. ಬೆಳಗ್ಗೆ ಅಡ್ಕಸ್ಥಳ ಮೂಲಕ ರಥಯಾಥ್ರೆ ಪೆರ್ಲಕ್ಕೆ ಆಗಮಿಸಲಿದೆ. ವಿವಿಧೆಡೆ ಸಂಚರಿಸಿ ಸಂಜೆ 5.30ಕ್ಕೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಕ್ಕೆ ಶೋಭಾಯಾತ್ರೆ ಮೂಲಕ ತೆರಳಿ, ನಂತರ ಪಾದುಕಾಪೂಜೆ, ಭಜನೆ, ನಡೆಯುವುದು. ಅಲ್ಲಿಂದ ಶ್ರೀ ಸತ್ಯಸಾಯಿ ಅಭಯನಿಕೇತನಕ್ಕೆ ಶೋಭಾಯಾಥ್ರೆ ಮೂಲಕ ತೆರಳಿ ಪಾದುಕಾದರ್ಶನ, ಸತ್ಸಂಗ ನಡೆಯುವುದು.

