ಬದಿಯಡ್ಕ: ಇನ್ಸ್ಟಾಗ್ರಾಮ್ನಲ್ಲಿ ಕಮೆಂಟ್ ಹಾಕಿರುವ ದ್ವೇಷದಲ್ಲಿ ತಂಡವೊಂದು ಹಲ್ಲೆ ನಡೆಸಿದ ಪರಿಣಾಮ ಬದಿಯಡ್ಕದ ಧವನೀಶ್, ತನ್ಮಯ್ ಹಾಗೂ ಶ್ರೇಯಸ್ ಎಂಬವರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕ ನಿವಾಸಿ ನಾಸಿರ್, ಸಾಬಿತ್, ಸಿರಾಜ್, ರಿಯಾಸ್, ಅನ್ನಾಶಾ ಸೇರಿದಂತೆ ಎಂಟು ಮಂದಿ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ತಂಡ ಕೃತ್ಯವೆಸಗಿರುವುದಾಗಿ ಗಾಯಾಳುಗಳು ದೂರಿದ್ದಾರೆ.
ಇದೇ ಪ್ರಕರಣದಲ್ಲಿ ಮಹಮ್ಮದಾಲಿ, ಸಿರಾಜ್, ಸಾಬಿತ್, ಹನಾನ್ಶಹಾಲ್, ನಾಸಿರ್ ಎಂಬವರಿಗೆ ಹಲ್ಲೆ ನಡೆಸಿರುವ ಬಗ್ಗೆ ಭರತ್ಶೆಟ್ಟಿ, ಹರೀಶ್, ಅಕ್ಷಯ್, ಮಹೇಶ್, ಧನ್ವಿತ್ಸೇರಿದಂತೆ ಹಲವರ ವಿರುದ್ಧ ಪೊಲೀಸರು ಪ್ರತಿದೂರು ದಾಖಲಿಸಿಕೊಂಂಡಿದ್ದಾರೆ. ಶುಕ್ರವಾರ ರಾತ್ರಿ ತಂಡ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಗಾಯಾಳುಗಳು ದೂರು ನೀಡಿದ್ದರು.

