ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಚುನಾವಣೆ ಪ್ರಚಾರ ಭರದಿಂದ ಮುಂದುವರಿಯುತ್ತಿದೆ. ಇದರಂತೆ ಯುಡಿಎಫ್ ಉಮೇದ್ವಾರ ಕಲ್ಲಟ್ರ ಮಾಹಿನ್ ಕಾರಡ್ಕ ಮತ್ತು ಬದಿಯಡ್ಕ ಪಂಚಾಯತ್ಗಳಲ್ಲಿ ನಿನ್ನೆ ಕಾರ್ನರ್ ಸಭೆ ನಡೆಸಿದರು. ಕಾರಡ್ಕ ಪಂಚಾಯತ್ನ ಕುಂಟಾರಿನಲ್ಲಿ ನಡೆದ ಕಾರ್ನರ್ ಸಭೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿ ದರು. ಪಂಚಾಯತ್ ಚುನಾವಣಾ ಸಮಿತಿ ಅಧ್ಯಕ್ಷ ಪುರುಷೋತ್ತಮನ್ ಕಾರಡ್ಕ ಅಧ್ಯಕ್ಷತೆ ವಹಿಸಿದರು. ಮುಳ್ಳೇರಿಯದಲ್ಲಿ ಬಳಿಕ ನಡೆದ ಯುಡಿಎಫ್ ಚುನಾವಣಾ ಪ್ರಚಾರ ಸಭೆಯನ್ನು ಮುಸ್ಲಿಂ ಲೀಗ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ ಸಲಾಂ ಉದ್ಘಾಟಿಸಿದರು. ರಾಜ್ಯ ಕೋಶಾಧಿಕಾರಿ ಸಿ.ಟಿ. ಅಹಮ್ಮದಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್ಮಾನ್, ಪಿ.ಎಂ. ಮುನೀರ್ ಹಾಜಿ, ಗೋವಿಂದನ್ ನಾಯರ್, ಮಾಹಿನ್ ಕೇಳೋಟ್, ಶಜೀರ್ ಇಕ್ಬಾಲ್ ಮೊದಲಾದವರು ಮಾತನಾಡಿದರು.



