HEALTH TIPS

ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆದ ಕೆ.ಸುರೇಂದ್ರನ್ ರ ಥೀಮ್ ಸಾಂಗ್

ಕಾಸರಗೋಡು: ಕೋವಳಂ ಅರಮನೆಯ ಪ್ರತಿಭಟನೆಯ ಮಧ್ಯದಲ್ಲಿ ಪೊಲೀಸರು ಯುವ ನಾಯಕನನ್ನು ಸುತ್ತುವರೆದು ಥಳಿಸುವುದರಿಂದ ಹಿಡಿದು ಮಂಜೇಶ್ವರದಲ್ಲಿ ಮತದಾರರ ಬಳಿ ತೆರಳಿ ಮತಕ್ಕಾಗಿ ಮನವಿ ಮಾಡುವವರೆಗೆ ಕೆ. ಸುರೇಂದ್ರನ್ ಅವರ ಜೀವನ ಚರಿತ್ರೆಯನ್ನು ಎರಡು ನಿಮಿಷಗಳಲ್ಲಿ ಪ್ರಸ್ತುತಪಡಿಸಿದ ಎಐ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ.

ಕೆ. ಸುರೇಂದ್ರನ್ ಅವರ ಚುನಾವಣಾ ಗೀತೆ 'ಕಾವ್ಯನೀತಿ'ಯನ್ನು 12 ಗಂಟೆಗಳಲ್ಲಿ 10 ಲಕ್ಷ ಜನರು ವೀಕ್ಷಿಸಿದ್ದಾರೆ. ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ತಿರುವನಂತಪುರಂ ಮೇಯರ್ ವಿ.ವಿ. ರಾಜೇಶ್, ಮಂಗಳೂರು ಶಾಸಕ ಭರತ್ ಶೆಟ್ಟಿ ಮತ್ತು ಇತರರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಅವರು ಯುವ ಮೋರ್ಚಾದ ಉಸ್ತುವಾರಿಯಲ್ಲಿದ್ದಾಗ ನಡೆದ ಹೋರಾಟ ಮತ್ತು ಪ್ತಿಭಟನೆಗಳು, ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿರುದ್ಧದ ಆಂದೋಲನ ಮತ್ತು ಪ್ರಧಾನಿ ಮತ್ತು ಗೃಹ ಸಚಿವರಂತಹ ರಾಷ್ಟ್ರೀಯ ನಾಯಕರೊಂದಿಗಿನ ಚಿತ್ರಗಳನ್ನು ಎಐ ಮೂಲಕ ಸಂಯೋಜಿಸಲಾಗಿದೆ.

ಎಐ ಬಳಸಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ೨೦೧೬ ರಲ್ಲಿ ಸುರೇಂದ್ರನ್ ಅವರನ್ನು ೮೯ ಮತಗಳಿಂದ ಸೋಲಿಸಿದ್ದಕ್ಕಾಗಿ ಮಂಜೇಶ್ವರದ ಜನರಿಗೆ ಸಿಹಿ ಸೇಡು ತೀರಿಸಿಕೊಳ್ಳಲು ಈ ಚುನಾವಣೆ ಒಂದು ಅವಕಾಶ ಎಂದು ಹಾಡಿನಲ್ಲಿ ಹೇಳಲಾಗಿದೆ.

'ಈ ಬಾರಿ ಸುರೇಂದ್ರನ್'  ಎಂಬ ಕನ್ನಡ ಶೀರ್ಷಿಕೆಯೊಂದಿಗೆ ಬಿಡುಗಡೆಯಾದ ಸುರೇಂದ್ರನ್ ಅವರ ಜೀವನ ಚರಿತ್ರೆಯ ವೀಡಿಯೊ ಕರ್ನಾಟಕದಲ್ಲೂ ಹಿಟ್ ಆಗಿದೆ. ಈ ವೀಡಿಯೊವನ್ನು ಕೇರಳದ ಕೋಝಿಕ್ಕೋಡ್ ಮೂಲದ ಪತ್ರಕರ್ತ ಎಂ ಸುವರ್ಣ ಪ್ರಸಾದ್ ಮತ್ತು ಬೆಂಗಳೂರಿನಲ್ಲಿ ಐಟಿ ವಲಯದಲ್ಲಿ ಕೆಲಸ ಮಾಡುವ ಅರವಿಂದ್ ಮೈಲಕ್ಕರ ನಿರ್ಮಿಸಿ ಸಂಕಲನ ಮಾಡಿದ್ದಾರೆ.

ವೀಡೊಯೋ ವೀಕ್ಷಿಸಲು ಲಿಂಕ್..

 https://www.facebook.com/reel/785806960962292




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries